
ಲಖನೌ(ಡಿ.06): ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ ವಿವಾಹವಾಗಿದೆ ಎಂದರೆ ನಂಬುತ್ತೀರಾ? ಬಹುಶಃ ನಂಬಬೇಕಾಗಿಯೂ ಇಲ್ಲ, ಆದರೂ ಇಂತದ್ದೊಂದು ಮದುವೆಯಾಗಿದೆ.
ಆದರೆ ಇದು ಉ.ಪ್ರ.ದ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಗಮನ ಸೆಳೆಯುವುದಕ್ಕಾಗಿ ನಡೆಸಿದ ನಕಲಿ ಮದುವೆ. ಸೀತಾಪುರದಲ್ಲಿ ಅಂಗನವಾಡಿ ಪ್ರತಿಭಟನೆಯಲ್ಲಿ ಆದಿತ್ಯನಾಥ್ರ ಮುಖವಾಡ ಧರಿಸಿದ ಕಾರ್ಯಕರ್ತೆಯೊಬ್ಬರು, ವಧುವಂತೆ ನಟಿಸಿದ ಸಂಘದ ಜಿಲ್ಲಾಧ್ಯಕ್ಷೆ ನೀತು ಸಿಂಗ್ಗೆ ತಾಳಿ ಕಟ್ಟಿ ಸಾಂಕೇತಿಕ ಮದುವೆ ನಡೆಯಿತು. ಆದಿತ್ಯನಾಥ್ ಶುಕ್ರವಾರ ಸೀತಾಪುರಕ್ಕೆ ಆಗಮಿಸಲಿದ್ದು, ಅವರೊಂದಿಗೆ ಲಖನೌಗೆ ತೆರಳುತ್ತೇನೆ. ಬೇಡಿಕೆ ಈಡೇರದಿದ್ದಲ್ಲಿ ಕುದುರೆಯ ಮೇಲೆ ತೆರಳುತ್ತೇನೆ ಎಂದು ನೀತು ಸಿಂಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.