ಬೆಂಗಳೂರಿನಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು

Published : Oct 13, 2016, 02:57 AM ISTUpdated : Apr 11, 2018, 12:39 PM IST
ಬೆಂಗಳೂರಿನಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು

ಸಾರಾಂಶ

ರಾತ್ರಿ 9 ಕ್ಕೆ ಬೆಂಗಳೂರಿಗೆ ತಲುಪಿದವಳು ರಾತ್ರಿ 11ಕ್ಕೆ ಮೃತ್ತಪಟ್ಟಿದ್ದಾಳೆ ಎಂದು ತವರು ಮನೆಗೆ ಕರೆ ಹೋಗಿದೆ. ಸ್ವಾತಿಗೆ ವಿಷಪ್ರಾಷಣ ಮಾಡಿಸಿ ನೇಣು ಹಾಕಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ಬೆಂಗಳೂರು (ಅ.13): ತವರು ಮನೆಯಿಂದ ಗಂಡನ ಮನೆಗೆ ಬಂದ ಎರಡೆ ಗಂಟೆಯಲ್ಲಿ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ  ಬೆಂಗಳೂರಿನಲ್ಲಿ ನಡೆದಿದೆ.

ಮೃತಪಟ್ಟಿರುವ ಗೃಹಿಣಿ, ಸ್ವಾತಿ (21), ಮೈಸೂರಿನ ನಂಜನಗೂಡು ತಾಲ್ಲೂಕಿನ ನಂದಿಗುಂದಪುರ ಗ್ರಾಮದ ನಿವಾಸಿಯಾಗಿದ್ದಾರೆ.

4 ವರ್ಷಗಳ ಹಿಂದೆ ಚೇತನ್ ಎಂಬುವರ ಜೊತೆ ವಿವಾಹ ಆಗಿತ್ತು. ಸ್ವಾತಿ, ನಿನ್ನೆ ನಂದಿಗುಂದಪುರದಿಂದ ಗಂಡನ ಜೊತೆ ಬೆಂಗಳೂರಿಗೆ ಬಂದಿದ್ದಳು. ‌

ರಾತ್ರಿ 9 ಕ್ಕೆ ಬೆಂಗಳೂರಿಗೆ ತಲುಪಿದವಳು ರಾತ್ರಿ 11ಕ್ಕೆ ಮೃತ್ತಪಟ್ಟಿದ್ದಾಳೆ ಎಂದು ತವರು ಮನೆಗೆ ಕರೆ ಹೋಗಿದೆ.

ಸ್ವಾತಿಗೆ ವಿಷಪ್ರಾಷಣ ಮಾಡಿಸಿ ನೇಣು ಹಾಕಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಸ್ವಾತಿಯ ಪತಿ ಚೇತನ್ ಸೇರಿದಂತೆ ಅತ್ತೆ ಮಾವ ಪರಾರಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಗ್ರೆಸ್ ಒಳಜಗಳಕ್ಕೆ ಪ್ರತಿಪಕ್ಷ ಕಿಡಿ.. ನಾಯಕತ್ವವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್‌
ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ