
ಪಾಟ್ನಾ : ಬಿಹಾರದಲ್ಲಿ ಯುವತಿಯೋರ್ವಳು ತನ್ನ ವಿವಾಹ ಕಾರ್ಯಕ್ರಮ ನಡೆದ ಕೆಲವೇ ಗಂಟೆಯಲ್ಲಿ ತಂದೆಯ ಅಂತ್ಯಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಂಡ ಮನಕಲುಕುವ ಘಟನೆಯೊಂದು ನಡೆದಿದೆ.
ಬಿಹಾರದ ಕೈಮುರ್ ಪ್ರದೇಶದಲ್ಲಿ ಯುವತಿಯ ವಿವಾಹ ಕಾರ್ಯಕ್ರಮ ನಡೆದಿದ್ದು, ಇದಾದ ಕೆಲವೇ ಸಂದರ್ಭದಲ್ಲಿ ಯುವತಿಯ ತಂದೆ ಗುಂಡೇಟಿಗೆ ಬಲಿಯಾಗಿದ್ದರು.
ತನ್ನ ಮಗಳ ಕನ್ಯಾದಾನಕ್ಕಾಗಿ ಉಪವಾಸವಿದ್ದು, ಕನ್ಯಾದಾನ ನಡೆಸಿಕೊಟ್ಟು ಕೆಲವೇ ಗಂಟೆಗಳಲ್ಲಿ ಗುಂಡೇಟಿನಿಂದ ಮೃತರಾಗಿದ್ದಾರೆ. ತಾಳಿ ಕಟ್ಟಿಸಿಕೊಂಡ ಯುವತಿ ಸೀದಾ ತಂದೆ ಅಂತಿಮ ಸಂಸ್ಕಾರವನ್ನು ನೆರವೇರಿಸುವ ದುರ್ಗತಿ ಬಂದೊದಗಿತು. ಈ ಬಗ್ಗೆ ವಧು ದುಃಖ ತೋಡಿಕೊಂಡಿದ್ದಾರೆ. ತಾನು ತನ್ನ ಪತಿ ಸೇರಿ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾಗಿ ಹೇಳಿದ್ದಾಳೆ.
ದೇಶದಲ್ಲಿ ಇರುವ ಹಿಂದೂ ಸಂಪ್ರದಾಯದ ಪ್ರಕಾರವಾಗಿ ಯಾವುದೇ ಕುಟುಂಬದಲ್ಲಿ ವ್ಯಕ್ತಿಯು ಮೃತಪಟ್ಟಲ್ಲಿ ನವ ವಿವಾಹಿತರು ಸಾವಿನ ಸಂಸ್ಕಾರದಲ್ಲಿ ಒಂದು ವರ್ಷದ ವರೆಗೂ ಪಾಲ್ಗೊಳ್ಳುವಂತಿಲ್ಲ. ಆದರೆ ಇದೀಗ ಈ ನವ ವಿವಾಹಿತೆಯು ಮದುವೆಯಾದ ಒಂದೇ ಗಂಟೆಯಲ್ಲಿ ತನ್ನ ತಂದೆಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.