ನಿಧಿ ಆಸೆಗಾಗಿ ಬಾಲಕನನ್ನು ಕಲ್ಲಿನ ಗುಂಡಿಯಲ್ಲಿ ಹೂತಿಟ್ಟ ಶಂಕೆ: ಬಳ್ಳಾರಿಯಲ್ಲಿ ಕರುಣಾಜನಕ ಕಥೆ

Published : Sep 11, 2016, 09:29 PM ISTUpdated : Apr 11, 2018, 12:55 PM IST
ನಿಧಿ ಆಸೆಗಾಗಿ ಬಾಲಕನನ್ನು ಕಲ್ಲಿನ ಗುಂಡಿಯಲ್ಲಿ ಹೂತಿಟ್ಟ ಶಂಕೆ: ಬಳ್ಳಾರಿಯಲ್ಲಿ ಕರುಣಾಜನಕ ಕಥೆ

ಸಾರಾಂಶ

ಚಿತ್ರದುರ್ಗ(ಸೆ.12): ನಿಧಿಯ ಅಸೆಗಾಗಿ ಬಾಲಕನನ್ನು ಕಲ್ಲಿನ ಗುಂಡಿಯಲ್ಲಿ ಹೂತು ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಕಂಚೀಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕಂಚೀಪುರ ಗ್ರಾಮದ ತೋಟವೊಂದರ ಸಮೀಪದಲ್ಲಿರುವ ಕಲ್ಲು ಗುಂಡಿಯಲ್ಲಿ ಮುಚ್ಚಿ ಹಾಕಿದ್ದ ಬಾಲಕನ ಕೈ ಮಾತ್ರ ಕಾಣುತ್ತಿತ್ತು. ಅಲ್ಲಿಯೆ ಕುರಿ ಮೆಯಿಸುತ್ತಿದ್ದ ಕುರಿಗಾಹಿಗಳ ಇದನ್ನು ನೋಡಿ, ಗ್ರಾಮದವರನ್ನು ಕರೆಸಿ ಬಾಲಕನನ್ನು ಕಲ್ಲು ಗುಂಡಿಯಿಂದ ಹೊರಗೆ ತೆಗೆದು ಹೊಸದುರ್ಗ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಮೈಯಲ್ಲಾ ಗಾಯಗಳಾಗಿ ತೀವ್ರ ಅಸ್ವಸ್ಥನಾಗಿದ್ದ ಇವನನ್ನು ಬಳಿಕ ಚಿತ್ರದುರ್ಗ ಆಸ್ಪತ್ರೆಗೆ ರವಾನಿಸಲಾಗಿದೆ

ಬಾಲಕನಿಗೆ ಮಾತು ಬರುವುದಿಲ್ಲ. ಅಷ್ಟೇ ಅಲ್ಲದೆ ಅಂಗವಿಕಲನಾಗಿರುವುದರಿಂದ ಆತನ ಹೆಸರು, ಯಾವ ಊರು ಎಂದು ತಿಳಿದು ಬಂದಿಲ್ಲ. ಚಿತ್ರದುರ್ಗ ಮತ್ತು ಹೊಸದುರ್ಗದ ವೈದ್ಯರು ಇವನ ಸ್ಥಿತಿ ಗಂಭೀರವಾಗಿದ್ದು, ಹೃದಯ ಬಡಿತ ಕಡಿಮೆ ಇದೆ ಅಂತಾ ಹೇಳಿದ್ದಾರೆ. ನಿಧಿಗಾಗಿ ದುಷ್ಕರ್ಮಿಗಳು ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯೋಗ ಕೊನೆಯಾಗುವ ದಿನಗಳು ಸಮೀಪಿಸಿವೆ: ಸಿಎಂ ಸಿದ್ದರಾಮಯ್ಯ ವಿರುದ್ದ ನಟ ಜಗ್ಗೇಶ್ ಬೇಸರ
ಸವದತ್ತಿಯ ಭೀರೇಶ್ವರ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ, ಮೂರ್ತಿ ಕದ್ದು ಹೊರವಲಯದಲ್ಲಿ ಬಿಸಾಕಿದ ಕಳ್ಳರು