500 ಕೋಟಿ ಕೊಡದಿದ್ದರೆ ಸಾಮೂಹಿಕ ಹತ್ಯೆ: ಬೆಂಗಳೂರು ವಿಪ್ರೋ ಉದ್ಯೋಗಿಗಳಿಗೆ ಬೆದರಿಕೆ ಇಮೇಲ್

Published : May 06, 2017, 12:16 AM ISTUpdated : Apr 11, 2018, 01:10 PM IST
500 ಕೋಟಿ ಕೊಡದಿದ್ದರೆ ಸಾಮೂಹಿಕ ಹತ್ಯೆ: ಬೆಂಗಳೂರು ವಿಪ್ರೋ ಉದ್ಯೋಗಿಗಳಿಗೆ ಬೆದರಿಕೆ ಇಮೇಲ್

ಸಾರಾಂಶ

ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಂಸ್ಥೆಯು ಸೈಬರ್ ಭಯೋತ್ಪಾದನೆಯಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ. 20 ದಿನಗಳೊಳಗೆ ಅಂದರೆ ಮೇ.25ರೊಳಗೆ ಹಣ ಪಾವತಿಯಾಗದಿದ್ದರೆ  ರಾಸಾಯನಿಕ ವಿಷಾನಿಲ 'ಬಿಟ್'ಕಾಯ್ನಸ್' ಬಳಸಿ ಸಂಸ್ಥೆಯ ಸಿಬ್ಬಂದಿಗಳನ್ನು ಕೊಲ್ಲಲಾಗುವುದು' ಎಂದು ಮೇಲ್'ನಲ್ಲಿ ತಿಳಿಸಲಾಗಿದೆ. ಬೆದರಿಕೆಯ ಇಮೇಲ್ ಶುಕ್ರವಾರ ಬಂದಿದ್ದು, ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಮಂದಿಗೆ ಮೇಲ್ ಕಳುಹಿಸಲಾಗಿದೆ.

ಬೆಂಗಳೂರು(ಮೇ.06): ಡಿಜಿಟಲ್ ಪೇಮೆಂಟ್'ನಲ್ಲಿ 500 ಕೋಟಿ ನೀಡದಿದ್ದರೆ ವಿಷ  ಅನಿಲದ ಮೂಲಕ ಬೆಂಗಳೂರಿನ ವಿಪ್ರೋ ಕಚೇರಿಯ ಎಲ್ಲ ಉದ್ಯೋಗಿಗಳನ್ನು ಕೊಲ್ಲುವುದಾಗಿ ಅನಾಮದೇಯ ಬೆದರಿಕೆಯ ಇಮೇಲ್ ಬಂದಿದೆ.

ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಂಸ್ಥೆಯು ಸೈಬರ್ ಭಯೋತ್ಪಾದನೆಯಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ. 20 ದಿನಗಳೊಳಗೆ ಅಂದರೆ ಮೇ.25ರೊಳಗೆ ಹಣ ಪಾವತಿಯಾಗದಿದ್ದರೆ  ರಾಸಾಯನಿಕ ವಿಷಾನಿಲ ' ಬಳಸಿ ಸಂಸ್ಥೆಯ ಸಿಬ್ಬಂದಿಗಳನ್ನು ಕೊಲ್ಲಲಾಗುವುದು' ಎಂದು ಮೇಲ್'ನಲ್ಲಿ ತಿಳಿಸಲಾಗಿದೆ. ಬೆದರಿಕೆಯ ಇಮೇಲ್ ಶುಕ್ರವಾರ ಬಂದಿದ್ದು, ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಮಂದಿಗೆ ಮೇಲ್ ಕಳುಹಿಸಲಾಗಿದೆ.

ರಾಸಾಯನಿಕ ವಿಷಾನಿಲವನ್ನು  ಕಚೇರಿಯ ಕೆಪೆಟೇರಿಯಾದಲ್ಲಿ ಆಹಾರದ ಮೂಲಕ , ಡ್ರೋನ್ ಬಳಕೆ, ಶೌಚಾಲಯ ಅಥವಾ ಶೌಚಾಲಯದ ಪೇಪರ್ ಮೂಲಕ ಸಿಂಪಡಿಸಿ ಸಿಬ್ಬಂದಿಯನ್ನು ಕೊಲ್ಲಲಾಗುವುದು. ಒಂದು ಕೇಜಿ ರಾಸಾಯನಿಕ ವಿಷಾನಿಲವನ್ನು ಬಳಸಲಿದ್ದು, ಇದರಲ್ಲಿ ಎನ್ವಲಪ್ ಕವರ್' ಮೂಲಕ 2 ಗ್ರಾಮ್ ಬಳಸಿ ಹತ್ಯೆ ಮಾಡಲಾಗುವುದು ಎಂದು ಬೆದರಿಕೆ ಮೇಲ್'ನಲ್ಲಿ ತಿಳಿಸಲಾಗಿದೆ.

ಬೆದರಿಕೆ ಕಳುಹಿಸಿರುವ ವ್ಯಕ್ತಿಯು ಈ ವರ್ಷದ ಜನವರಿ 21ರಂದು  ಕೋಲ್ಕತ್ತಾದ ಬಾರ್ನಾಗರ್ ಪ್ರದೇಶದಲ್ಲಿ 22 ಬೀದಿ ನಾಯಿಗಳು ಒಮ್ಮೊಂದೊಮ್ಮೆ ಮೃತಪಟ್ಟಿದ್ದವು. ಇದು ಪತ್ರಿಕೆಗಳಲ್ಲೂ ಸುದ್ದಿಯಾಗಿತ್ತು. ಇದಕ್ಕೆ ವಿಷಾನಿಲವೆ ಕಾರಣ ಎಂಬುದನ್ನು' ಕೋಟ್ ಮಾಡಿದ್ದಾನೆ. Ramesh2@protonmail.com ಐಡಿಯಿಂದ ಬೆದರಿಕೆ ಸಂದೇಶ ಬಂದಿದೆ. ವಿಪ್ರೋ ಸಿಬ್ಬಂದಿ ಐಟಿ ಕಾಯಿದೆ ಸೆಕ್ಷನ್ 66 ಎಫ್'ನಡಿ  ಪ್ರಕರಣ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಸಾಯನಿಕ ವಿಷಾನಿಲಾವಾದ 'ರೆಸಿನ್'ಅನಿಲವನ್ನು ಶತ್ರುಗಳನ್ನು ಕೊಲ್ಲಲು ಬಳಸಲಾಗುತ್ತದೆ. ಈ ವಿಷಾನಿಲವು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಹಲವು ರಾಜಕಾರಣಿಗಳನ್ನು ಕೊಲ್ಲಲು ಕಳುಹಿಸಲಾಗಿತ್ತು' ಎಂಬುದು ಎಫ್'ಬಿಐ ತನಿಖೆಯಿಂದ ತಿಳಿದು ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್'ಐ'ಆರ್ ದಾಖಲಿಸಲಾಗಿದ್ದು, ತನಿಖೆಯನ್ನು ಚುರುಕುಗೊಳಿಸುತ್ತೇವೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಎಸ್.ರವಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ