
ನವದೆಹಲಿ(ಮೇ.06): ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಬಾಲಾಪರಾಯಾಗಿ ಮೂರು ವರ್ಷ ಶಿಕ್ಷೆ ಪೂರೈಸಿ ಹೊರಬಂದಿರುವ ‘ಬಾಲರಾಕ್ಷಸ’ ಇದೀಗ ದಕ್ಷಿಣ ಭಾರತದ ರೆಸ್ಟೋರೆಂಟ್ವೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದಾನೆ!
2012ರ ಡಿ.16ರಂದು ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಿರ್ಭಯಾ ಮೇಲೆ ಅತ್ಯಂತ ಅಮಾನುಷವಾಗಿ ವರ್ತಿಸಿದ್ದು ಇದೇ ‘ಬಾಲರಾಕ್ಷಸ.’ ಘಟನೆ ನಡೆದಾಗ ಆತನಿಗೆ 18 ವರ್ಷವಾಗಿರಲಿಲ್ಲ ಎಂಬ ಕಾರಣಕ್ಕೆ ಇತರ ಆರೋಪಿಗಳಂತೆ ಗಂಭೀರ ಶಿಕ್ಷೆಯಿಂದ ಆತ ಪಾರಾಗಿದ್ದ. ಮೂರು ವರ್ಷ ಅನುಭವಿಸಿ ಹೊರಬಂದಿದ್ದ. ಆದರೆ ಆತನಿಗೆ ತನ್ನನ್ನು ಜನರು ಹೊಡೆದು ಕೊಲ್ಲಬಹುದು ಎಂಬ ಭೀತಿ ಇತ್ತು. ಹೀಗಾಗಿ ಎನ್ಜಿಒವೊಂದು ಬಾಲ ರಾಕ್ಷಸನನ್ನು ದಕ್ಷಿಣ ಭಾರತದ ರೆಸ್ಟೋರೆಂಟ್ವೊಂದಕ್ಕೆ ಸೇರಿಸಿದೆ.
ಸದ್ಯ ಆತನಿಗೆ 23 ವರ್ಷವಾಗಿದ್ದು, ಉತ್ತಮ ಜೀವನ ಸಾಗಿಸುತ್ತಿದ್ದಾನೆ. ಆತನಿಗೆ ಉದ್ಯೋಗ ಕೊಟ್ಟಿರುವ ಮಾಲೀಕರಿಗೂ ಈತ ದೆಹಲಿ ಗ್ಯಾಂಗ್ರೇಪ್ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವ ಎಂಬುದು ಗೊತ್ತಿಲ್ಲ. ಶುಕ್ರವಾರ ಗ್ಯಾಂಗ್ರೇಪ್ ಪ್ರಕರಣದ ಆಪರಾಧಿಗಳ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವುದು ಕೂಡ ಆತನಿಗೆ ಗೊತ್ತಾಗುವ ಸಂಭವ ಕಡಿಮೆ. ಏಕೆಂದರೆ, ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಆತ ರಾಷ್ಟ್ರೀಯ ಸುದ್ದಿವಾಹಿನಿಗಳನ್ನು ನೋಡುವ ಸಾಧ್ಯತೆ ಇಲ್ಲ ಎಂದು ಎನ್ಜಿಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.