'ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸಿದ್ದರಾಮಯ್ಯಗೆ ಪಾಠ ಕಲಿಸುತ್ತೇವೆ'

By Suvarna Web DeskFirst Published Oct 9, 2017, 2:20 PM IST
Highlights

ಮಾಜಿ ಸಚಿವ, ಬಿಜೆಪಿ ಮುಖಂಡ ವಿ. ಶ್ರೀನಿವಾಸಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಟುರು ಹಾಕಿದ್ದಾರೆ.‘ಸಿದ್ದರಾಮಯ್ಯ ಅವರೊಬ್ಬ ತುಘಲಕ್ ದರ್ಬಾರಿನ ಮನುಷ್ಯ. ರಾಜಕೀಯ ಕಿಲ್ಲರ್. ಸಚಿವ ಮಹದೇವಪ್ಪ ಸಿಎಂ ಮನೆ ಸೇವಕ ಎಂದು ಕಿಡಿಕಾರಿದ್ದಾರೆ.

ಮೈಸೂರು: ಮಾಜಿ ಸಚಿವ, ಬಿಜೆಪಿ ಮುಖಂಡ ವಿ. ಶ್ರೀನಿವಾಸಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಟುರು ಹಾಕಿದ್ದಾರೆ.‘ಸಿದ್ದರಾಮಯ್ಯ ಅವರೊಬ್ಬ ತುಘಲಕ್ ದರ್ಬಾರಿನ ಮನುಷ್ಯ. ರಾಜಕೀಯ ಕಿಲ್ಲರ್. ಸಚಿವ ಮಹದೇವಪ್ಪ ಸಿಎಂ ಮನೆ ಸೇವಕ ಎಂದು ಕಿಡಿಕಾರಿದ್ದಾರೆ.

ಜತೆಗೆ ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸಿದ್ದರಾಮಯ್ಯಗೆ ಪಾಠ ಕಲಿಸುತ್ತೇವೆಂದು ಎಚ್ಚರಿಸಿದ್ದಾರೆ. ನಗರದಲ್ಲಿ ಭಾನುವಾರ ಬಿಜೆಪಿ ರೈತ ಮೋರ್ಚಾ ಆಯೋಜಿಸಿದ್ದ ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ನನ್ನ ಗುರಿ. ಅವರೊಬ್ಬ ಪ್ರಜಾಪ್ರಭುತ್ವ ವಿರೋಧಿ, ತುಘಲಕ್ ದರ್ಬಾರಿನ ಮನುಷ್ಯ. ಅಧಿಕಾರಕ್ಕಾಗಿ ಯಾರನ್ನು ಬೇಕಾದರೂ ಮುಗಿಸಲು, ಅದಕ್ಕಾಗಿ ಏನೂ ಮಾಡಲು ಸಿದ್ಧ. ಅದಕ್ಕಾಗಿ ರಾಜ ಕೀಯ ಕಿಲ್ಲರ್ ಎಂದು ಏಕವಚನದಲ್ಲೇ ಟೀಕಿಸಿದರು.

ಸಚಿವ ಎಚ್.ಸಿ. ಮಹದೇವಪ್ಪನಿಗೆ ಸಿದ್ದರಾಮಯ್ಯ ಅವರ ಮನೆಯಲ್ಲಿ ಕೆಲಸ ಮಾಡಿ ಕೊಂಡು, ಹೇಳೋದನ್ನು ಕೇಳಿಕೊಂಡು ಇರುವುದೇ ಕೆಲಸ. ನಂಜನಗೂಡು ಉಪ ಚುನಾವಣೆಯಲ್ಲಿ ಖರ್ಚು ಮಾಡಿದ ಬಂಡವಾಳ ಎಲ್ಲಿಂದ ಬಂದಿದೆ ಎಂಬುದು ಗೊತ್ತಿದೆ. ಅದರ ಬಗ್ಗೆ ಸಮಯ ಬಂದಾಗ ಹೇಳುತ್ತೇನೆ. ರಾಜಕೀಯದಲ್ಲಿ ನಾನು ಮತ್ತು ವಿಶ್ವನಾಥ್ ಹಳೆಯ ಮಿತ್ರರು. ಒಂದೆಡೆ ಸೇರಿದ್ದರಿಂದ ಮಾತುಕತೆ ನಡೆಸಿದ್ದೇವೆ. ಸಿದ್ದರಾಮಯ್ಯ ಸೋಲಿಸೋದು ಮುಖ್ಯ. ನಾನು ಚುನಾವಣಾ ಕೀಯದಿಂದ ನಿವೃತ್ತಿ ಹೊಂದಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಸ್ಪರ್ಧಿಸಲಿ ನೋಡೋಣ ಎಂದರು.

click me!