
ಮೈಸೂರು (ಅ.20): ಮನೆಗೆ ಸೇರಿಸಿಕೊಳ್ಳಿ ಎಂದು 53 ದಿನಗಳಿಂದ ಗೃಹಿಣಿಯೊಬ್ಬಳು ಪತಿ ಮನೆ ಮುಂದೆ ಅಹೋರಾತ್ರಿ ಧರಣಿ ಕುಳಿತುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ವಿಜಯನಗರ 3ನೇ ಹಂತದಲ್ಲಿರುವ ಮುರುಳಿ ಎಂಬುವರ ಮನೆ ಮುಂದೆ ಆತನ ಪತ್ನಿ ಕರುಣಾಶ್ರೀ ಧರಣಿ ಕುಳಿತಿದ್ದಾರೆ.
ಇಷ್ಟಾದರೂ ಗಂಡನ ಮನೆಯವರಿಗೆ ಕಿಂಚಿತ್ತೂ ಕರುಣೆ ಬಂದಿಲ್ಲ. ಕಳೆದ 53 ದಿನಗಳಿಂದ ಗೃಹಿಣಿ ಕರುಣಾಶ್ರೀ ಮನೆಯ ಜಗಲಿ ಮೇಲೆ ವಾಸವಿದ್ದು, ಇಲ್ಲಿಯೇ ಅಡುಗೆ ಮಾಡಿ ಊಟ ಮಾಡುತ್ತಿದ್ದಾಳೆ.
53 ದಿನದಿಂದಲೂ ಪೊಲೀಸರು ಕೂಡ ಇಲ್ಲೇ ಠಿಕಾಣಿ ಹೂಡಿದ್ದಾರೆ. ಇನ್ನೂ ತನ್ನ ಗಂಡನಿಗೆ ಶಾಸಕರೊಬ್ಬರ ಸಹಕಾರವಿದೆ ಎಂದು ಕಾರುಣ್ಯಶ್ರೀ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.