ನೂತನ ಮೇಯರ್ ಆರ್.ಸಂಪತ್ ರಾಜ್ ಬಳಿ ಪತ್ನಿ ಆಗ್ರಹಿಸಿಕೊಂಡಿದ್ದೇನು ಗೊತ್ತಾ?

Published : Sep 29, 2017, 11:04 AM ISTUpdated : Apr 11, 2018, 12:35 PM IST
ನೂತನ ಮೇಯರ್ ಆರ್.ಸಂಪತ್ ರಾಜ್ ಬಳಿ ಪತ್ನಿ ಆಗ್ರಹಿಸಿಕೊಂಡಿದ್ದೇನು ಗೊತ್ತಾ?

ಸಾರಾಂಶ

ಮಳೆಯಿಂದಾಗಿ ಹಾಳಾಗಿರುವ ನಗರದ ರಸ್ತೆಗಳ ದುರಸ್ತಿ ಕಾರ್ಯ ಹಾಗೂ ಮಳೆಹಾನಿ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕೆಂದು ನೂತನ ಮೇಯರ್ ಆಗಿ ಆಯ್ಕೆ ಯಾಗಿರುವ ಆರ್.ಸಂಪತ್‌ರಾಜ್ ಅವರಿಗೆ ಪತ್ನಿ ಕವಿತಾ ಸಲಹೆಯುತವಾಗಿ ಆಗ್ರಹಿಸಿದ್ದಾರೆ.

ಬೆಂಗಳೂರು(ಸೆ.29): ಮಳೆಯಿಂದಾಗಿ ಹಾಳಾಗಿರುವ ನಗರದ ರಸ್ತೆಗಳ ದುರಸ್ತಿ ಕಾರ್ಯ ಹಾಗೂ ಮಳೆಹಾನಿ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕೆಂದು ನೂತನ ಮೇಯರ್ ಆಗಿ ಆಯ್ಕೆ ಯಾಗಿರುವ ಆರ್.ಸಂಪತ್‌ರಾಜ್ ಅವರಿಗೆ ಪತ್ನಿ ಕವಿತಾ ಸಲಹೆಯುತವಾಗಿ ಆಗ್ರಹಿಸಿದ್ದಾರೆ.

ಪಾಲಿಕೆಯ ಪೌರ ಸಭಾಂಗಣದಲ್ಲಿ ಗುರುವಾರ ನಡೆದ ಮೇಯರ್ ಹಾಗೂ ಉಪಮೇಯರ್ ಚುನಾವಣೆ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ತಮ್ಮ ಮಕ್ಕಳೊಂದಿಗೆ ಚುನಾವಣಾ ಪ್ರಕ್ರಿಯೆ ವೀಕ್ಷಿಸಿದ ಅವರು, ತಮ್ಮ ಪತಿ ಮೇಯರ್ ಆಗಿ ಆಯ್ಕೆಯಾದ ಸಂತಸದ ಸಂದರ್ಭವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು.

ಪತಿಯೇ ಮೇಯರ್ ಆಗಿರುವುದರಿಂದ ನಿಮ್ಮ ಆಗ್ರಹ ಏನಾಗಿರುತ್ತದೆ ಎಂಬ ಪ್ರಶ್ನೆಗೆ, ಮೊದಲು ಅವರು ಮಳೆ ಹಾನಿ ಸಮಸ್ಯೆಗಳನ್ನು ಪರಿಹರಿಸಿ ಮತ್ತೆ ಸಮಸ್ಯೆಗಳಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಗುಂಡಿಬಿದ್ದು ಹಾಳಾಗಿ ರುವ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ ಮುಸ್ಲಿಂ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!