9 ವರ್ಷಗಳ ನ್ಯಾಯಾಂಗ ಹೋರಾಟದಲ್ಲಿ ಕಡೆಗೂ ಯಶಸ್ವಿಯಾದರು ಅಪರ್ಣಾ ಪುರೋಹಿತ್

Published : Aug 21, 2017, 04:22 PM ISTUpdated : Apr 11, 2018, 12:39 PM IST
9 ವರ್ಷಗಳ ನ್ಯಾಯಾಂಗ ಹೋರಾಟದಲ್ಲಿ  ಕಡೆಗೂ ಯಶಸ್ವಿಯಾದರು ಅಪರ್ಣಾ ಪುರೋಹಿತ್

ಸಾರಾಂಶ

ಲೆಫ್ಟಿನೆಂಟ್ ಕಲೋನಿಲ್ ಪುರೋಹಿತ್ ಪತ್ನಿ ಅಪರ್ಣಾ ಪುರೋಹಿತ್’ಗೆ ಇದು ಅತ್ಯಂತ ಭಾವನಾತ್ಮಕ ಘಳಿಗೆ. ಸತತ 9 ವರ್ಷಗಳ ನಿರಂತರ ಕಾನೂನು ಹೋರಾಟದ ನಂತರ ತಮ್ಮ ಪತಿಗೆ ಸುಪ್ರೀಂಕೋರ್ಟ್’ನಿಂದ ಕಡೆಗೂ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನವದೆಹಲಿ (ಆ.21): ಲೆಫ್ಟಿನೆಂಟ್ ಕಲೋನಿಲ್ ಪುರೋಹಿತ್ ಪತ್ನಿ ಅಪರ್ಣಾ ಪುರೋಹಿತ್’ಗೆ ಇದು ಅತ್ಯಂತ ಭಾವನಾತ್ಮಕ ಘಳಿಗೆ. ಸತತ 9 ವರ್ಷಗಳ ನಿರಂತರ ಕಾನೂನು ಹೋರಾಟದ ನಂತರ ತಮ್ಮ ಪತಿಗೆ ಸುಪ್ರೀಂಕೋರ್ಟ್’ನಿಂದ ಕಡೆಗೂ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪತಿಗೆ ಜಾಮೀನು ಸಿಕ್ಕ ವಿಚಾರ ಹೊರಬೀಳುತ್ತಿದ್ದಂತೆ ಅಪರ್ಣಾ ಪುರೋಹಿತ್ ಭಾವುಕರಾಗಿ ಕಂಬನಿ ಮಿಡಿದಿದ್ದಾರೆ. ನನಗೆ ಬಹಳ ಸಂತೋಷವಾಗುತ್ತಿದೆ. ನ್ಯಾಯಾಲಯಕ್ಕೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನನ್ನ ಯಜಮಾನರು ಮನೆಗೆ ಬರುತ್ತಿದ್ದಾರೆಂದು ಸಂತೋಷವಾಗುತ್ತಿದೆ. ಇದು ಕೇವಲ ಜಾಮೀನಾದರೂ ಕನಿಷ್ಠ ಪಕ್ಷ ಮಕ್ಕಳ ಜೊತೆ ಕಾಲಕಳೆಯಲಿದ್ದಾರೆ ಎಂದು ಭಾವುಕರಾದರು.

2008 ರ ಮಾಲೆಗಾಂವ್ ಸ್ಪೋಟದ ಪ್ರಮುಖ ಆರೋಪಿ ಪ್ರಸಾದ್ ಶ್ರೀಕಾಂತ್ ಪುರೋಹಿತ್’ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು.  ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜಾಮೀನನ್ನು ನೀಡಿದೆ.

ಪೊರೋಹಿತ್ ಪರ ವಾದ ಮಂಡಿಸಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಪ್ರಕರಣದಿಂದ ಬಿಡುಗಡೆಗೊಳಿಸಿ ಎಂದು ನಾವು ಕೇಳುತ್ತಿಲ್ಲ. ಮಧ್ಯಂತರ ಜಾಮೀನು ನೀಡಿ ಎಂದು ನ್ಯಾಯಾಲಯಕ್ಕೆ ಕೇಳಿಕೊಂಡರು.

ಚಿತ್ರ ಕೃಪೆ : (ಎಎನ್ಐ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ