
ಬೆಂಗಳೂರು(ಆ.21): ಬಿಎಸ್'ವೈ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಯಡಿಯೂರಪ್ಪರನ್ನು ಸಿಲುಕಿಸಲು ಸಂಚು ನಡೆದಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ. ಡಿನೋಟಿಫಿಕೇಷನ್ ವಿರೋಧಿಸಿ ತಕರಾರು ಅರ್ಜಿ ಸಲ್ಲಿಸಲು ನಕಲಿ ಮಹಿಳೆಯನ್ನು ಸೃಷ್ಟಿಸಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ.
ಆಶಾ ಪರದೇಶಿ ಎಂಬುವವರು ಡಿನೋಟಿಫಿಕೇಷನ್ ವಿರುದ್ಧ ತಕರಾರು ಅರ್ಜಿ ಸಲ್ಲಿಸಿದ್ದರು. ಬಳಿಕ ಈ ತಕರಾರು ಅರ್ಜಿಯನ್ನು ಹಿಂದೆ ಕೂಡಾ ಪಡೆಯಲಾಗಿತ್ತು. ಆದರೀಗ ಆಶಾ ಎಂಬ ವ್ಯಕ್ತಿ ಇಲ್ಲವೇ ಇಲ್ಲ ಎಂಬುವುದು ಎಸಿಬಿಯ ವಾದವಾಗಿದೆ. ತನಿಖೆಯ ಸಂದರ್ಭದಲ್ಲಿ ಈ ಮಹಿಳೆಯ ಹೆಸರಲ್ಲಿ ಬಂದ ತಕರಾರು ಅರ್ಜಿಯಲ್ಲಿ ನೋಂದಾಯಿಸಿರುವ ವಿಳಾಸ ನಕಲಿ ಎಂಬ ಅಂಶ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.