ಪತಿ ಬಲಿ ಪಡೆದ ವಿಮಾನ ಏರಲು ವಾಯುಸೇನೆ ಸೇರಿದ ಧೀರೆ!

Published : Jul 16, 2019, 02:35 PM ISTUpdated : Jul 16, 2019, 02:37 PM IST
ಪತಿ ಬಲಿ ಪಡೆದ ವಿಮಾನ ಏರಲು ವಾಯುಸೇನೆ ಸೇರಿದ ಧೀರೆ!

ಸಾರಾಂಶ

ಮಿರಾಜ್ 2000 ಯುದ್ಧ ವಿಮಾನ ಅಪಘಾತದಲ್ಲಿ ಪತಿ ಸಾವು| ಪರೀಕ್ಷೆ ಬರೆದು ವಾಯುಸೇನೆ ಸೇರ್ಪಡೆಗೊಂಡ ಪತ್ನಿ| ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್ ಪತ್ನಿ ಗರೀಮಾ ಅಬ್ರೋಲ್| ವಾರಾಣಸಿಯಲ್ಲಿ ನಡೆದ ಸೇವಾ ಆಯ್ಕೆ ಮಂಡಳಿ ಪರೀಕ್ಷೆಯಲ್ಲಿ ಗರೀಮಾ ತೇರ್ಗಡೆ|

ನವದೆಹಲಿ(ಜು.16): ಪ್ರೀತಿ ಪಾತ್ರರ ಸಾವಿಗ ಕಾರಣವಾದ ವಸ್ತುವನ್ನು ಕಂಡರೆ ಆಗದಿರುವುದು ಮಾನವ ಗುಣ. ಇದರ ಕಾರಣದಿಂದಲೇ ನಮ್ಮವರು ದೂರವಾದ ಕುರಿತು ಮನಸ್ಸಿನಲ್ಲಿ ಸಣ್ಣದೊಂದು ದ್ವೇಷ ಮನೆ ಮಾಡಿರುತ್ತದೆ.

ಆದರೆ ಪತಿಯ ಸಾವಿಗೆ ಕಾರಣವಾದ ಯುದ್ಧ ವಿಮಾನವನ್ನೇ ತನ್ನ ವೃತ್ತಿಯನ್ನಾಗಿ ಸ್ವೀಕರಿಸಿದ ಧೀರ ಪತ್ನಿಯ ಕತೆ ಇದು. ಪತಿಯನ್ನು ಬಲಿ ಪಡೆದ ವಿಮಾನವನ್ನು ತಾನೂ ಓಡಿಸುವ ಮೂಲಕ ಆತನನ್ನು ನಿತ್ಯ ನೆನಯುವ ದಿಟ್ಟ ನಿರ್ಧಾರದ ಕತೆ ಇದು.

ಮಿರಾಜ್ 2000 ಯುದ್ಧ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಸ್ಕ್ವಾಡ್ರನ್  ಲೀಡರ್ ಸಮೀರ್ ಅಬ್ರೋಲ್ ಪತ್ನಿ ಗರೀಮಾ ಅಬ್ರೋಲ್ ವಾಯುಸೇನೆ ಸೇರಿದ್ದಾರೆ.

ವಾರಾಣಸಿಯಲ್ಲಿ ನಡೆದ ಸೇವಾ ಆಯ್ಕೆ ಮಂಡಳಿ ಪರೀಕ್ಷೆಯಲ್ಲಿ ಗರೀಮಾ ತೇರ್ಗಡೆಯಾಗಿದ್ದು, ತೆಲಂಗಾಣದಲ್ಲಿರುವ ಭಾರತೀಯ ವಾಯುಪಡೆ ಅಕಾಡೆಮಿ ಸೇರ್ಪಡೆಯಾಗಲಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಮಿರಾಜ್ 200೦ ಯುದ್ಧ ವಿಮಾನ ಪರೀಕ್ಷಾರ್ಥ ಹಾರಾಟ ಸಂದರ್ಭದಲ್ಲಿ ಸ್ಕ್ವಾಡ್ರನ್ ಲೀಡರ್ ಸಮೀರ್ ಅಬ್ರೋಲ್ ಹಾಗೂ ಸಿದ್ದಾರ್ಥ ನೇಗಿ ಮೃತಪಟ್ಟಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!