
ಕಾನ್ಪುರ(ಸೆ.26): ಕಾನ್ಪುರದಲ್ಲಿ ನಡೆದ ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ 197 ರನ್`ಗಳ ಗೆಲುವು ದಾಖಲಿಸುವುದರೊಂದಿಗೆ ಹೊಸ ಮೈಲಿಗಲ್ಲು ಸಾಧಿಸಿದೆ. ಭಾರತದ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಆಲ್`ರೌಂಡರ್`ಗಳಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ.
ಯಾವುದೇ ತಂಡ ಭಾರತ ಪ್ರವಾಸ ಕೈಗೊಂಡರೂ ಅವರನ್ನ ಇನ್ನಿಲ್ಲದಂತೆ ಕಾಡುವ ಸ್ಪಿನ್ ಜೋಡಿ ಇವರದ್ದು. ಅಂದಹಾಗೆ, ಅಶ್ವಿನ್ ಮತ್ತು ಜಡೇಜಾ ಜೋಡಿ ಯಾಕೆ ಅಷ್ಟೊಂದು ಪರಿಂಕಾರಿ ಗೊತ್ತಾ..? ಪಂದ್ಯದ ಬಳಿಕ ಮಾತನಾಡಿರುವ ಜಡೇಜಾ ಈ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ.
`ಸಾಮಾನ್ಯವಾಗಿ ವಿಕೆಟ್ ಬೀಳುತ್ತಿಲ್ಲ ಎಂದಾಗ ನಾವು ಬಹಳಷ್ಟು ಚರ್ಚೆ ಮಾಡುತ್ತೇವೆ. ಮೊದಲ ಇನ್ನಿಂಗ್ಸ್`ನಲ್ಲಿ ಲಾಥಮ್ ಮತ್ತು ವಿಲಿಯಮ್`ಸನ್, ಅಶ್ವಿನ್ ಮತ್ತು ನಾನು ವಿರಾಮದ ಸಂದರ್ಭ ಬಹಳಷ್ಟು ಚರ್ಚೆ ನಡೆಸಿದ್ದೆವು. ವೈಡ್ ಎಸೆಯಬೇಕಾ..? ಪಿಚ್ ಎಲ್ಲಿ ಹಾಕಬೇಕಾ ಯಾವ ಆಂಗಲ್`ನಲ್ಲಿ ಬಾಲ್ ಎಸೆಯಬೇಕೆಂಬ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.