ಕಳೆದ 11 ತಿಂಗಳಲ್ಲಿ ಒಮ್ಮೆಯೂ ಮೋದಿಯನ್ನು ನೆನೆಪಿಸಿಕೊಳ್ಳದ ಕೇಜ್ರಿವಾಲ್; ಕಾರಣವೇನು ಗೊತ್ತಾ?

Published : Feb 14, 2018, 05:10 PM ISTUpdated : Apr 11, 2018, 12:43 PM IST
ಕಳೆದ 11 ತಿಂಗಳಲ್ಲಿ ಒಮ್ಮೆಯೂ ಮೋದಿಯನ್ನು ನೆನೆಪಿಸಿಕೊಳ್ಳದ ಕೇಜ್ರಿವಾಲ್; ಕಾರಣವೇನು ಗೊತ್ತಾ?

ಸಾರಾಂಶ

ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಇಂದಿಗೆ ಮೂರು ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಅಚ್ಚರಿಗೆ ಎಂದರೆ ಸದಾ ಟ್ವಿಟರ್’ನಲ್ಲಿ ಸಕ್ರಿಯವಾಗಿರುವ ಅರವಿಂದ್ ಕೇಜ್ರಿವಾಲ್ ಕೆಲ ದಿನಗಳಿಂದ ಮೌನ ವಹಿಸಿದ್ದಾರೆ. 

ನವದೆಹಲಿ (ಫೆ.14): ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಇಂದಿಗೆ ಮೂರು ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಅಚ್ಚರಿಗೆ ಎಂದರೆ ಸದಾ ಟ್ವಿಟರ್’ನಲ್ಲಿ ಸಕ್ರಿಯವಾಗಿರುವ ಅರವಿಂದ್ ಕೇಜ್ರಿವಾಲ್ ಕೆಲ ದಿನಗಳಿಂದ ಮೌನ ವಹಿಸಿದ್ದಾರೆ. 
ಅರವಿಂದ್ ಕೇಜ್ರಿವಾಲ್ ಟ್ವಿಟರ್’ನಲ್ಲಿ ಸದಾ ಸಕ್ರಿಯವಾಗಿದ್ದಾರೆ. 13 ಮಿಲಿಯನ್ ಫಾಲೋವರ್ಸನ್ನು ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೊತೆ ಟ್ವೀಟ್ ವಾರ್ ನಡೆಸುತ್ತಿದ್ದ ಕೇಜ್ರಿವಾಲ್ ಕಳೆದ 11 ತಿಂಗಳಲ್ಲಿ ಒಂದು ಬಾರಿಯೂ ಮೋದಿ ಎನ್ನುವ ಪದವನ್ನು ಬಳಸಿಲ್ಲ. 2017. ಮಾರ್ಚ್ ರಂದು ಮಾಡಿದ ಟ್ವೀಟ್’ನಲ್ಲಿ ಕೊನೆಯ ಬಾರಿ ’ಮೋದಿ’ ಎನ್ನುವ ಪದವನ್ನು ಬಳಸಿದ್ದರು.  
ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಸರ್ವಾಧಿಕಾರಿ ಸರ್ಕಾರ, ಸೇನಾ ವಿರೋಧಿ ಸರ್ಕಾರ ಎಂದು ಟ್ವೀಟ್ ಮಾಡಿದ್ದರು. ಇದು ಮೋದಿ ಅಭಿಮಾನಿಗಳನ್ನು ಕೆರಳಿಸಿತ್ತು. ಪಂಜಾಬ್, ಗೋವಾ ಚುನಾವಣೆಯಲ್ಲಿ ಆಪ್ ಸೋಲಲು ಇದು ಒಂದು ಕಾರಣ ಎನ್ನಲಾಗಿದೆ. ಹಾಗಾಗಿ ಕೇಜ್ರಿವಾಲ್ ಮೌನಕ್ಕೆ ಜಾರಿದ್ದಾರೆ ಎಂದು ಪಕ್ಷದ ನಾಯಕರು, ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ