
ಅಹಮದಾಬಾದ್(ಆ.08): ಅಮಿತ್ ಶಾ ಹಾಗೂ ಅಹಮದ್ ಪಟೇಲ್ ನಡುವಿನ ಜಿದ್ದಾಜಿದ್ದಿನಿಂದ ರಾಷ್ಟ್ರದ ಗಮನ ಸೆಳೆದಿರುವ ಗುಜರಾತ್ನಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಇವತ್ತು ಮತದಾನ ನಡೆಯಲಿದೆ. ಅಮಿತ್ ಶಾ ಲೆಕ್ಕಾಚಾರ ವರ್ಕೌಟ್ ಆಗುತ್ತಾ ಅಥವಾ ಅಹಮದ್ ಪಟೇಲ್ ರಾಜ್ಯಸಭೆ ಪ್ರವೇಶಿಸುವವರೋ ಎಂಬುದು ನಿರ್ಧಾರವಾಗಲಿದೆ.
ವರ್ಕೌಟ್ ಆಗುತ್ತಾ ಅಮಿತ್ ಶಾ ಲೆಕ್ಕಾಚಾರ?: ಕಾಂಗ್ರೆಸ್ ಅಭ್ಯರ್ಥಿ ಅಹಮದ್ ಪಟೇಲ್ ಗೆಲ್ತಾರಾ..?
ಗುಜರಾತ್'ನಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಇವತ್ತು ಮತದಾನ ನಡೆಯಲಿದೆ. 182 ಸದಸ್ಯ ಬಲದ ವಿಧಾನಸಭೆಯಲ್ಲಿ 121 ಸ್ಥಾನ ಹೊಂದಿರುವ ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಪೈಕಿ ಎರಡು ಸ್ಥಾನಗಳು ಸುಲಭವಾಗಿ ಬಿಜೆಪಿ ತೆಕ್ಕೆಗೆ ಬೀಳಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಇನ್ನು ಮತ್ತೊಂದು ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಹಮದ್ ಪಟೇಲ್ ಮತ್ತು ಬಿಜೆಪಿಯ ಅಭ್ಯರ್ಥಿಯಾಗಿ ಬಲವಂತಸಿಂಗ್ ರಜಪೂತ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.
ಆದರೆ ಮೂರನೇ ಸ್ಥಾನಕ್ಕಾಗಿ ನಡೆದಿರುವ ಜಿದ್ದಾಜಿದ್ದಿ ರಾಷ್ಟ್ರಮಟ್ಟದ ಗಮನ ಸೆಳೆದಿದ್ದು, ಅಹಮದ್ ಪಟೇಲ್ ಮತ್ತು ಅಮಿತ್ ಶಾ ನಡುವೆ ಫೈಟ್ ಏರ್ಪಟ್ಟಿದೆ. ಹೇಗಾದರೂ ಮಾಡಿ ಅಹಮದ್ ಪಟೇಲ್ ರಾಜ್ಯಸಭಾ ಪ್ರವೇಶ ತಡೆಯಲು ಅಮಿತ್ ಶಾ ಎಲ್ಲಾ ರಾಜಕೀಯ ತಂತ್ರಗಳನ್ನು ಪ್ರಯೋಗಿಸಿದ್ದಾರೆ. ಇತ್ತ ಕಮಲ ಆಪರೇಷನ್ ಭೀತಿಯಿಂದ ಬೆಂಗಳೂರಿನ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ ಕಾಂಗ್ರೆಸ್ ಶಾಸಕರು ಗುಜರಾತ್ಗೆ ವಾಪಸ್ ಆಗಿದ್ದಾರೆ. ಅಹಮದಾಬಾದ್ಗೆ ಮರಳಿರುವ ಕಾಂಗ್ರೆಸ್ ಶಾಸಕರು ಇವತ್ತು ನೇರವಾಗಿ ಗಾಂಧಿ ನಗರಕ್ಕೆ ತೆರಳಿ ಮತ ಚಲಾಯಿಸಲಿದ್ದಾರೆ.
ಗೆಲ್ಲಲು 45 ಮತಗಳ ಅಗತ್ಯತೆ ಇದ್ದು, ಎರಡು ಸ್ಥಾನಗಳು ಸುಲಭವಾಗಿ ಬಿಜೆಪಿ ಪಾಲಾಗಲಿವೆ. ಅಹಮದ್ ಪಟೇಲ್ ಗೆಲುವಿಗೆ ತನ್ನ ಬಳಿ ಅಗತ್ಯ ಮತ ಇದೆ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಎನ್ಸಿಪಿ ಮತ್ತು ಜೆಡಿಯು ಮತಗಳನ್ನು ನಂಬಿಕೊಂಡಿದೆ. ಆದರೆ ಮೊದಲನೇ ಮತ್ತು ಎರಡನೇ ಪ್ರಾಶಸ್ತ್ಯದ ಮತಗಳ ಮೂಲಕ ತನ್ನ ಮೂರನೇ ಅಭ್ಯರ್ಥಿಯನ್ನು ರಾಜ್ಯಸಭೆಗೆ ಕಳುಹಿಸುವ ಲೆಕ್ಕಾಚಾರ ಹಾಕಿರುವ ಬಿಜೆಪಿ ಕೊನೆಯ ಕ್ಷಣದ ತಂತ್ರಗಾರಿಕೆಗೆ ಮೊರೆ ಹೋಗಿದೆ. ಇತ್ತ ಕಾಂಗ್ರೆಸ್ ಅಹಮದ್ ಪಟೇಲ್ ಗೆಲುವಿನ ವಿಶ್ವಾಸದಲ್ಲಿದೆಯಾದರೂ ಅಡ್ಡ ಮತದಾನದ ಭೀತಿ ಇನ್ನಿಲ್ಲದೇ ಕಾಡುತ್ತಿದೆ.
ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.