
ಕಾಂಗ್ರೆಸ್ನಿಂದ ಇಲ್ಲಿ ಹಾಲಿ ಶಾಸಕ ಹಾಗೂ ಸಚಿವ ಎಂ. ಕೃಷ್ಣಪ್ಪ ಅವರೇ ಅಭ್ಯರ್ಥಿ. ಎಂ. ಕೃಷ್ಣಪ್ಪ ಅವರ ಭದ್ರಕೋಟೆ ಇದಾಗಿರುವುದರಿಂದ ಬಿಜೆಪಿ ಇಲ್ಲಿ ಹರಸಾಹಸ ಮಾಡಬೇಕಾದ ಸ್ಥಿತಿಯಲ್ಲಿದೆ. ಕೃಷ್ಣಪ್ಪ ಅವರನ್ನೇ ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆದಿದ್ದರೂ ಫಲ ನೀಡಲಿಲ್ಲ. ಇನ್ನೂ ಸಮಯವಿದೆ ಎಂಬ ಅನುಮಾನದ ಮಾತು ಬಿಜೆಪಿ ಪಾಳೆಯದಿಂದ ಈಗಲೂ ಕೇಳಿಬರುತ್ತದೆ. ಪಕ್ಷದ ವಕ್ತಾರ ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯ ಅಶ್ವತ್ಥನಾರಾಯಣ, ಬಿಬಿಎಂಪಿಯ ಮಾಜಿ ಸದಸ್ಯ ರವೀಂದ್ರ ಅವರ ಹೆಸರುಗಳ ಪ್ರಮುಖವಾಗಿ ಚಾಲ್ತಿಯ ಲ್ಲಿವೆ. ರವೀಂದ್ರ ಅವರು ಕಳೆದ ಬಾರಿ ಸ್ಪರ್ಧಿಸಿ ಸೋಲುಂಡಿದ್ದರು. ಜೆಡಿಎಸ್ನಲ್ಲಿ ಪ್ರಬಲ ಆಕಾಂಕ್ಷಿಗಳಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.