
ನವದೆಹಲಿ (ಡಿ.11): ಎರಡನೇ ಪುತ್ರ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಬಳಿಕ ಮೊದಲ ಪುತ್ರ ರಾಜೀವ್ ಗಾಂಧಿ ಪೈಲಟ್ ವೃತ್ತಿ ತ್ಯಜಿಸಬೇಕು ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಯಸಿದ್ದರು.
ಈ ಸಂಬಂಧ ರಾಜೀವ್ ಗಾಂಧಿಯನ್ನು ರಾಜಕೀಯಕ್ಕೆ ಬರುವಂತೆ ಮನವೊಲಿಸಲು ಇಂದಿರಾ ಆಧ್ಯಾತ್ಮ ಗುರು ಓಶೋ ಕಾರ್ಯದರ್ಶಿ ಲಕ್ಷ್ಮೀ ಸಹಾಯ ಪಡೆದಿದ್ದರು.
ಕವಿ ಕಲಾವಿದ ರಶೀದ್ ಮ್ಯಾಕ್ಸ್ವೆಲ್ `ದ ಓನ್ಲಿ ಲೈಫ್, ಓಶೋ, ಲಕ್ಷ್ಮೀ ಆ್ಯಂಡ್ ದ ವರ್ಲ್ಡ್ ಇನ್ ಕ್ರೈಸಿಸ್' ಎಂಬ ಪುಸ್ತಕದಲ್ಲಿ ಈ ಸಂಗತಿ ನಮೂದಿಸಲಾಗಿದೆ. ಇಂದಿರಾ ಮನೆಗೆ ಬರಲು ಲಕ್ಷ್ಮೀ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.