ವಾಟ್ಸ್'ಆಪ್ ಈ ರೀತಿಯೂ ಪ್ರಯೋಜನಕ್ಕೆ ಬರುತ್ತೇ ಅಂದ್ರೆ ನಿಜಕ್ಕೂ ನಂಬಲೇಬೇಕು..!

Published : Mar 18, 2018, 07:35 PM ISTUpdated : Apr 11, 2018, 12:34 PM IST
ವಾಟ್ಸ್'ಆಪ್ ಈ ರೀತಿಯೂ ಪ್ರಯೋಜನಕ್ಕೆ ಬರುತ್ತೇ ಅಂದ್ರೆ ನಿಜಕ್ಕೂ ನಂಬಲೇಬೇಕು..!

ಸಾರಾಂಶ

ಜಿಸಿ ಲ್ಯಾಬ್ ಬಳಿ ನಿಂತಿದ್ದ ಪೋಟೋ ಗ್ರಾಫರ್ ಆನಂದ್ ಎನ್ನುವವರ ಪಲ್ಸರ್ ಬೈಕ್‌ ನಿನ್ನೆ ರಾತ್ರಿ ಕಳ್ಳತನವಾಗಿದೆ. ವಾಹನದ ಪೋಟೋ ಸಮೇತ ನಂಬರ್ ಗ್ರೂಪ್'ನಲ್ಲಿ ಹಾಕಿ ಈ ನಂಬರಿನ ವಾಹನ ಕಂಡರೆ ಕರೆ ಮಾಡಲು ತಿಳಿಸಿದ್ದಾರೆ.

ಸಾಮಾನ್ಯವಾಗಿ ವಾಟ್ಸಾಪ್ ಗ್ರೂಪ್ ಗುಡ್ ಮಾರ್ನಿಂಗ್ ಗುಡ್ ನೈಟ್'ಗೆ ಹೆಚ್ಚಿನದಾಗಿ ಬಳಕೆಯಾಗುತ್ತದೆ. ಆದರೆ ಇಲ್ಲೊಂದು ಪೋಟೋ ಗ್ರಾಫರ್ ಗ್ರೂಪ್ ಕಳೆದ ಹೋದ ಬೈಕ್ ಹುಡುಕಿಕೊಡಲು ಸಹಕಾರಿಯಾಗಿದೆ.

ಹೌದು, ಜಿಸಿ ಲ್ಯಾಬ್ ಬಳಿ ನಿಂತಿದ್ದ ಪೋಟೋ ಗ್ರಾಫರ್ ಆನಂದ್ ಎನ್ನುವವರ ಪಲ್ಸರ್ ಬೈಕ್‌ ನಿನ್ನೆ ರಾತ್ರಿ ಕಳ್ಳತನವಾಗಿದೆ. ವಾಹನದ ಪೋಟೋ ಸಮೇತ ನಂಬರ್ ಗ್ರೂಪ್'ನಲ್ಲಿ ಹಾಕಿ ಈ ನಂಬರಿನ ವಾಹನ ಕಂಡರೆ ಕರೆ ಮಾಡಲು ತಿಳಿಸಿದ್ದಾರೆ.

ಇಂದು ಕಳ್ಳತನವಾದ ಬೈಕನಲ್ಲಿ ರಾಜಾರೋಷವಾಗಿ ತಿರುಗಾಡುವಾಗ ಫೋಟೋಗ್ರಾಫರ್ ರಘು ಎನ್ನುವವರು ನೋಡಿ ಗ್ರೂಪ್'ನಲ್ಲಿ ‌ಮೆಸೇಜ್ ಹಾಕುವುದರ ಜೊತೆ ಆನಂದ್ ಅವರಿಗೆ ಕರೆ ಮಾಡಿದ್ದಾರೆ. ಮಯೂರ ಹೊಟೇಲ್ ಬಳಿ ಸಿಕ್ಕ ಕಳ್ಳನನ್ನು ಹಿಗ್ಗಾಮುಗ್ಗ ಥಳಿಸಿ ಬ್ರೂಸ್ ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳತನ ಮಾಡಿದ ರಾಮು ವಿದ್ಯಾರ್ಥಿ ಎನ್ನಲಾಗುತ್ತಿದ್ದು, ಬುದ್ದಿಮಾತು ಹೇಳಿ ಕಳಿಹಿಸುವಂತೆ ದೂರು ಕೊಟ್ಟ ಆನಂದ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ