
ನವದೆಹಲಿ : ‘ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಹೆಸರು ಯಾರಿಗೂ ಗೊತ್ತಿಲ್ಲ’ ಎಂದು ಕಾಂಗ್ರೆಸ್ ಮುಖಂಡ ವಿಲಾಸ್ ಮುತ್ತೆಮ್ವಾರ್ ಮಾಡಿದ ಟೀಕೆಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಮೂರು ಪ್ರಶ್ನೆಗಳ ಮೂಲಕ ತಿರುಗೇಟು ನೀಡಿದ್ದಾರೆ.
ಫೇಸ್ಬುಕ್ನಲ್ಲಿ ಈ ಬಗ್ಗೆ 3 ಪ್ರಶ್ನೆಗಳನ್ನು ಕೇಳಿರುವ ಜೇಟ್ಲಿ, ‘ಮಹಾತ್ಮಾ ಗಾಂಧೀಜಿ ತಂದೆಯ ಹೆಸರು ಏನು? ಸರ್ದಾರ್ ಪಟೇಲರ ತಂದೆಯ ಹೆಸರೇನು? ಸರ್ದಾರ್ ಪಟೇಲರ ಪತ್ನಿಯ ಹೆಸರೇನು?’ ಎಂದು ಅವರು ಪ್ರಶ್ನಿಸಿ, ಇಂತಹ ಪ್ರಶ್ನೆಗಳಿಗೆ ಎಲ್ಲರಿಗೂ ಉತ್ತರ ಗೊತ್ತಿರುವುದಿಲ್ಲ ಎಂದಿದ್ದಾರೆ.
ಬರೀ ಅಡ್ಡಹೆಸರು ಇಟ್ಟುಕೊಂಡು ರಾಜಕೀಯ ಮಾಡುವ ಪಕ್ಷ ಕಾಂಗ್ರೆಸ್ನದ್ದಾಗಿದೆ. ಪಕ್ಷಕ್ಕೆ ಅಹರ್ನಿಶಿ ದುಡಿದವರಿಗೆ ಅಲ್ಲಿ ಸ್ಥಾನಮಾನ ಸಿಗದು. ಕಾಂಗ್ರೆಸ್ನಲ್ಲಿ ಉನ್ನತ ಹುದ್ದೆಗೆ ಏರಬೇಕೆಂದರೆ ಅಲ್ಲಿ ಗಾಂಧಿ ಎಂಬ ಅಡ್ಡಹೆಸರು ಪ್ರಾಧಾನ್ಯತೆ ಪಡೆಯುತ್ತದೆ ಎಂದು ಜೇಟ್ಲಿ ಟೀಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.