ಸೆಕ್ಷನ್ 144 ಮತ್ತು ಕರ್ಫ್ಯೂ ನಡುವಿನ ವ್ಯತ್ಯಾಸಗಳೇನು? ಇಂದಿಗೆ ಬಹಳ ಮುಖ್ಯ

Published : Dec 19, 2019, 10:40 PM ISTUpdated : Dec 20, 2019, 12:36 PM IST
ಸೆಕ್ಷನ್ 144 ಮತ್ತು ಕರ್ಫ್ಯೂ ನಡುವಿನ ವ್ಯತ್ಯಾಸಗಳೇನು? ಇಂದಿಗೆ ಬಹಳ ಮುಖ್ಯ

ಸಾರಾಂಶ

ಕರ್ಫ್ಯೂ  ಮತ್ತು ಸೆಕ್ಷನ್ 144 ನಡುವಿನ ವ್ಯತ್ಯಾಸ ಏನು? ಎರಡು ಒಂದೇನಾ ಅಥವಾ ಭಿನ್ನತೆ ಇದೆಯಾ? ಗಲಭೆ ಸಂದರ್ಭದಲ್ಲಿ ಪದೇ ಪದೇ ಬಳಕೆಯಾಗುವ ಕಾನೂನಿನ ಅರ್ಥ ತಿಳಿದುಕೊಳ್ಳಿ

ಬೆಂಗಳೂರು(ಡಿ. 19)  ದೇಶದ ಹಲವು ಕಡೆ ಪೌರತ್ವ ಮಸೂದೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಮುಂಜಾಗೃತಾ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ ಕರ್ಫ್ಯೂ ಜಾರಿ ಮಾಡಲಾಗಿದೆ ಎಂಬ ಸುದ್ದಿ ಕೇಳುತ್ತವೆ. ಹಲವರಿಗೆ ಇವೆರಡರ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಹಾಗಾದರೆ ಸೆಕ್ಷನ್ 144 ಮತ್ತು  ಕರ್ಫ್ಯೂ ನಡುವಿನ ವ್ಯತ್ಯಾಸ ಏನು?

ಸೆಕ್ಷನ್144
ಕೋಮುಗಲಭೆ, ಹಿಂಸಾಚಾರದಂತಹ ಸಂದರ್ಭದಲ್ಲಿ ಸೆಕ್ಷನ್ 144 ಅಸ್ತ್ರ ಬಳಸಿಕೊಳ್ಳಲಾಗುತ್ತದೆ. ಜಿಲ್ಲಾ ಮಾಜಿಸ್ಟ್ರೇಟ್ ಸೆಕ್ಷನ್ 144ರ ಜಾರಿಯನ್ನು ತಿಳಿಸುತ್ತದೆ. 5 ಅಥವಾ ಅದಕ್ಕಿಂತ ಹೆಚ್ಚು ಜನ ಒಂದು ಕಡೆ ಸೇರುವುದನ್ನು ಈ ಸೆಕ್ಷನ್ ನಿಷೇಧಿಸುತ್ತದೆ.

ಅಲ್ಲದೇ ಯಾವುದೇ ರೀತಿಯ ಆಯುಧಗಳನ್ನು ಕೊಂಡೊಯ್ಯುವುದಕ್ಕೂ ನಿರ್ಭಂಧ ಹೇರುತ್ತದೆ. ಈ ನಿಯಮಗಳನ್ನು ಉಲ್ಲಂಘಿಸುವವರನ್ನು ಯಾವುದೇ ಸೂಚನೆ ನೀಡದೇ ಬಂಧಿಸುವ ಅಧಿಕಾರ ತನ್ನಿಂದ ತಾನೇ ಪೊಲೀಸರಿಗೆ ಲಭ್ಯವಾಗಿರುತ್ತದೆ.

ಈ ನಿಯಮದ ಅನ್ವಯ ಬಂಧನಕ್ಕೆ ಒಳಗಾದವರಿಗೆ ಗರಿಷ್ಠ ಮೂರು ವರ್ಷ ಕಾಲ ಜೈಲು ಶಿಕ್ಷೆ ವಿಧಿಸಲು ಸಹ ಅವಕಾಶ ಇರುತ್ತದೆ. ಇಂಟರ್ ನೆಟ್ ಬಂದ್ ಮಾಡುವ ಅಧಿಕಾರವನ್ನು ಇದು ಆಡಳಿತಕ್ಕೆ ನೀಡುತ್ತದೆ,

ಕರ್ಫ್ಯೂ ಎಂದರೇನು?
ಸೆಕ್ಷನ್ 144ಗಿಂತ  ಇದು ಭಿನ್ನ. ಜನರು ನಿರ್ದಿಷ್ಟ ಸಮಯದಲ್ಲಿ ಮನಯಲ್ಲೇ ಇರಬೇಕು. ಪೊಲೀಸರು ಅವಕಾಶ ಕೊಟ್ಟ ಸಮಯದಲ್ಲಿ ಮಾತ್ರ ಹೊರಗೆ ತಿರುಗಾಡಬಹುದು. ಹಿಂಸಾಚಾರ ವಿಕೋಪಕ್ಕೆ ಹೋದಾಗ ಪರಿಸ್ಥಿತಿ ತಹಬದಿಗೆ ತರಲು ಇದು ನೆರವಾಗುತ್ತದೆ.  ಒಂದು ನಿರ್ದಿಷ್ಟ ಪ್ರದೇಶಕ್ಕೆ  ಕರ್ಫ್ಯೂ ಹಾಕಬಹುದು.

ಕರ್ಫ್ಯೂವನ್ನು ಸಹ ಜಿಲ್ಲಾ ಮಾಜಿಸ್ಟ್ರೇಟ್ ಜಾರಿ ಮಾಡುತ್ತದೆ.  ಕರ್ಫ್ಯೂ ಜಾರಿಯಾದರೆ ಟ್ರಾಫಿಕ್ ಮೇಲೂ ಸಂಪೂರ್ಣ ನಿಯಂತ್ರಣ ಹೇರಲಾಗುವುದು. ಅಗತ್ಯ ಬಿದ್ದರೆ ಅಧಿಕಾರಿಗಳು  ಕರ್ಫ್ಯೂ ಅವಧಿ ವಿಸ್ತರಿಸಯುವ ಅಧಿಕಾರ ಹೊಂದಿರುತ್ತಾರೆ.

ಯಾವ ಕಾರಣಕ್ಕೆ ಗುಂಡು ಹಾರಿಸಬೇಕಾಯಿತು? ಹರ್ಷಾ ವಿವರಣೆ

ಕರ್ಫ್ಯೂ ಮೇಜರ್ ಪಾಯಿಂಟ್ಸ್

*  ಕರ್ಫ್ಯೂ ವೇಳೆ ಅನುಮತಿ ಇಲ್ಲದೆ ಯಾವ ವ್ಯಕ್ತಿ ಅಥವಾ ಸಂಘಟನೆ ಉಪವಾಸ ಸತ್ಯಾಗ್ರಹ ಮಾಡುವಂತೆ ಇಲ್ಲ

* ಯಾವುದೇ ವ್ಯಕ್ತಿ ಆಯುಧ ಅಥವಾ ಆ ರೀತಿ ಬಳಕೆ ಮಾಡುವ ವಸ್ತುಗಳೊಂದಿಗೆ ಸಂಚಾರ ಮಾಡುವಂತೆ ಇಲ್ಲ

* ಪರವಾನಗಿ ಇರುವ ಆಯುಧಗಳನ್ನು ಸಹ ಕೊಂಡೊಯ್ಯುವಂತೆ ಇಲ್ಲ.

* ಪಟಾಕಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ.

* ಸಮುದಾಯಕ್ಕೆ ಹಾನಿ ತರುವಂತಹ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಇಲ್ಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!