ಮಕ್ಕಳ ಸಾವಿನ ಬಗ್ಗೆ ಚರ್ಚೆ ವೇಳೆ ಸ್ಕೋರ್‌ ಎಷ್ಟೆಂದ ಸಚಿವ

Published : Jun 18, 2019, 08:00 AM IST
ಮಕ್ಕಳ ಸಾವಿನ ಬಗ್ಗೆ ಚರ್ಚೆ ವೇಳೆ ಸ್ಕೋರ್‌ ಎಷ್ಟೆಂದ ಸಚಿವ

ಸಾರಾಂಶ

ಮೆದುಳಿನ ಉರಿಯೂತ ಕಾಯಿಲೆಗೆ ಬಿಹಾರದಲ್ಲಿ ನೂರಾರು ಮಕ್ಕಳ ಸಾವು| ಮಕ್ಕಳ ಸಾವಿನ ಬಗ್ಗೆ ಚರ್ಚೆ ವೇಳೆ ಸ್ಕೋರ್‌ ಎಷ್ಟೆಂದ ಸಚಿವ| 

ಪಟನಾ[ಜೂ.18]: ಮೆದುಳಿನ ಉರಿಯೂತ ಕಾಯಿಲೆಗೆ ಬಿಹಾರದಲ್ಲಿ ನೂರಾರು ಮಕ್ಕಳು ಸಾವನ್ನಪ್ಪಿದ್ದು, ಈ ಕುರಿತು ಚರ್ಚೆಗೆ ಆಯೋಜಿಸಿದ್ದ ಸಭೆಯಲ್ಲಿ ಸಚಿವರು ಭಾರತ- ಪಾಕ್‌ ಪಂದ್ಯದ ಸ್ಕೋರ್‌ ಎಷ್ಟುಎಂದು ಕೇಳಿದ ಘಟನೆ ಮುಜ್ಫಫರ್‌ನಗರದಲ್ಲಿ ಭಾನುವಾರ ನಡೆದಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಮಕ್ಕಳು ಬಲಿಯಾದ ಮುಜಫ್ಫರ್‌ನಗರ ಆಸ್ಪತ್ರೆಗೆ ಕೇಂದ್ರ ಸಚಿವ ಹರ್ಷವರ್ಧನ್‌ಸಿಂಗ್‌ ಅವರು ಭೇಟಿ ನೀಡಿ ಬಂದ ಬಳಿಕ ಸಭೆಯೊಂದನ್ನು ಆಯೋಜಿಸಿದ್ದರು.

ಈ ವೇಳೆ ಸಭೆಯಲ್ಲಿ ಹಾಜರಿದ್ದ ಬಿಹಾರದ ಆರೋಗ್ಯ ಖಾತೆ ಸಚಿವ ಮಂಗಲ್‌ ಪಾಂಡೆ, ಭಾರತ- ಪಾಕಿಸ್ತಾನ ನಡುವಣ ಪಂದ್ಯದ ಸ್ಕೋರ್‌ ಎಷ್ಟುಆಯ್ತು ಎಂದು ಕೇಳುವ ಮೂಲಕ ತಮ್ಮ ಬೇಜವಾಬ್ಧಾರಿಯ ಪರಮಾವಧಿ ಮರೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು