(ವಿಡಿಯೋ)BBCಗೆ ಲೈವ್ ಸಂದರ್ಶನ ನೀಡುತ್ತಿದ್ದ ಪ್ರೊಫೆಸರ್ ಕೋಣೆಯೊಳಗೆ ನಡೆಯಿತು ಅಚಾತುರ್ಯ...!

Published : Mar 14, 2017, 09:39 AM ISTUpdated : Apr 11, 2018, 01:12 PM IST
(ವಿಡಿಯೋ)BBCಗೆ ಲೈವ್ ಸಂದರ್ಶನ ನೀಡುತ್ತಿದ್ದ ಪ್ರೊಫೆಸರ್ ಕೋಣೆಯೊಳಗೆ ನಡೆಯಿತು ಅಚಾತುರ್ಯ...!

ಸಾರಾಂಶ

ರವಿವಾರ ರಜಾ ದಿನ, ಹೀಗಿರುವಾಗ ನಿಮಗೆ ಬಾಸ್ ಕರೆ ಬಂದು ಯಾವುದಾದರೊಂದು ಬಹು ಮುಖ್ಯವಾದ ವಿಚಾರದ ಕುರಿತು ಚರ್ಚೆ ನಡೆಸುತ್ತಾರೆ. ಇದೇ ಸಂದರ್ಭದಲ್ಲಿ ನಿಮ್ಮ ಮಕ್ಕಳು ನೀವಿದ್ದ ಸ್ಥಳಕ್ಕೆ ಬಂದು ನಿಮ್ಮ ಮಾತುಕತೆಯೇ ನಿಂತುಹೋಗುವಂತ ಸನ್ನಿವೇಶ ಹುಟ್ಟಿಸಿದರೆ? ಇಂತಹುದೇ ಪರಿಸ್ಥಿತಿ ಹಲವರು ಎದುರಿಸಿರುತ್ತಾರೆ. ಸದ್ಯ ಬಿಬಿಸಿ ಚಾನೆಲ್'ಗೆ ಲೈವ್ ಸಂದರ್ಶನ ನೀಡುತ್ತಿದ್ದ ವ್ಯಕ್ತಿಯೂ ಇಂತಹುದೇ ಸಂದರ್ಭವನ್ನು ಎದುರಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲಾಥಾಣಗಳಲ್ಲಿ ವೈರಲ್ ಆಗುತ್ತಿದೆ.

ನವದೆಹಲಿ(ಮಾ.14): ರವಿವಾರ ರಜಾ ದಿನ, ಹೀಗಿರುವಾಗ ನಿಮಗೆ ಬಾಸ್ ಕರೆ ಬಂದು ಯಾವುದಾದರೊಂದು ಬಹು ಮುಖ್ಯವಾದ ವಿಚಾರದ ಕುರಿತು ಚರ್ಚೆ ನಡೆಸುತ್ತಾರೆ. ಇದೇ ಸಂದರ್ಭದಲ್ಲಿ ನಿಮ್ಮ ಮಕ್ಕಳು ನೀವಿದ್ದ ಸ್ಥಳಕ್ಕೆ ಬಂದು ನಿಮ್ಮ ಮಾತುಕತೆಯೇ ನಿಂತುಹೋಗುವಂತ ಸನ್ನಿವೇಶ ಹುಟ್ಟಿಸಿದರೆ? ಇಂತಹುದೇ ಪರಿಸ್ಥಿತಿ ಹಲವರು ಎದುರಿಸಿರುತ್ತಾರೆ. ಸದ್ಯ ಬಿಬಿಸಿ ಚಾನೆಲ್'ಗೆ ಲೈವ್ ಸಂದರ್ಶನ ನೀಡುತ್ತಿದ್ದ ವ್ಯಕ್ತಿಯೂ ಇಂತಹುದೇ ಸಂದರ್ಭವನ್ನು ಎದುರಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲಾಥಾಣಗಳಲ್ಲಿ ವೈರಲ್ ಆಗುತ್ತಿದೆ.

ರಾಬರ್ಟ್ ಕೈಲಿ ಓರ್ವ ಪ್ರಸಿದ್ಧ ಪ್ರೊಫೆಸರ್ ಹಾಗೂ ಅಂತರಾಷ್ಟ್ರೀಯ ವಿಚಾರಗಳ ವಿಶ್ಲೇಷಕರು. BBC ಇವರೊಂದಿಗೆ ಸುದ್ದಿ ಪ್ರಸಾರವಾಗುತ್ತಿದ್ದ ವೇಳೆ ವಿಡಿಯೋ ಕಾಲ್ ಲೈವ್ ಸಂದರ್ಶನವೊಂದನ್ನು ಆಯೋಜಿಸಿ ದಕ್ಷಿಣ ಕೊರಿಯಾದ ವಿಷಯವಾಗಿ ಚರ್ಚೆ ನಡೆಸುತ್ತಿತ್ತು. ಈ ಮಧ್ಯೆ ಪ್ರೊಫೆಸರ್ ಕುಳಿತಿದ್ದ ಕೋಣೆಯ ಬಾಗಿಲು ಅಚಾನಕ್ಕಾಗಿ ತೆರೆದಿದ್ದು, ಅವರ ಹಿರಿಯ ಪುತ್ರಿ ಒಳ ಪ್ರವೇಶಿಸುತ್ತಾಳೆ. ಇದಾದ ಕೆಲವೇ ಕ್ಷಣಗಳಲ್ಲಿ ಇವರ ಮತ್ತೊಬ್ಬ ಮಗು ವಾಕರ್ ಮೂಲಕ ಒಳ ಪ್ರವೇಶಿಸುತ್ತಾನೆ. ಇಷ್ಟೆಲ್ಲಾ ನಡೆಯುತ್ತಿದ್ದಂಯೇ ರಭಸವಾಗಿ ಇವರ ಪತ್ನಿಯೂ ಆಗಮಿಸಿ ಮಕ್ಕಳನ್ನು ಹೊರಗೊಯ್ಯುತ್ತಾಳೆ.

ಇಲ್ಲಿ ನಡೆದ ಕುತೂಹಲಕಾರಿ ಹಾಗೂ ಗಮನಿಸಲೇಬೇಕಾದ ವಿಚಾರವೆಂದರೆ ಪ್ರೊಫೆಸರ್ ಸಾಹೇಬರ ತಾಳ್ಮೆ. ಬೇರೆ ಯಾರಾದರೂ ಆಗಿದ್ದರೆ ಮಕ್ಕಳ ಮೇಲೆ ಗದರುತ್ತಿದ್ದರು. ಆದರೆ ಪ್ರೊಫೆಸರ್ ಮಾತ್ರ ತಾಳ್ಮೆಂವಹಿಸಿದ್ದಾರೆ ಅಲ್ಲದೇ ವಿನಯವಂತರಾಗಿ ಆ್ಯಂಕರ್ ಬಳಿ ಕ್ಷಮೆ ಯಾಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್