ಪ.ಬಂಗಾಳದಲ್ಲಿ ಬಿಜೆಪಿ ಅಧಿಕಾರ ಮುನ್ಸೂಚನೆ; ಬಾಂಗ್ಲಾದೇಶ ಸಂಸತ್ತಿನಲ್ಲಿ ಆತಂಕ ತೋಡಿಕೊಂಡ ಸಂಸದ ಅಖ್ತರ್ ಹುಸೇನ್!

Published : May 01, 2026, 12:43 PM IST
BJP MP nishikant Dubey

ಸಾರಾಂಶ

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಹುದು ಎಂಬ ಎಕ್ಸಿಟ್ ಪೋಲ್ ಭವಿಷ್ಯದಿಂದ ಬಾಂಗ್ಲಾದೇಶದ ಸಂಸದರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಹಾಕುವ ಭೀತಿ ಅವರನ್ನು ಕಾಡುತ್ತಿದೆ ಎಂದಿದ್ದಾರೆ. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಎಕ್ಸಿಟ್ ಪೋಲ್‌ಗಳಭವಿಷ್ಯವನ್ನು ನೋಡಿದ ಬಾಂಗ್ಲಾ ದೇಶದ ಸಂಸದ ಬಾಂಗ್ಲಾದೇಶ ಸಂಸದ ಅಖ್ತರ್ ಹುಸೇನ್ ಸಂಸತ್ತಿನಲ್ಲಿ ಆತಂಕ ಹೊರಹಾಕಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಲಿರುವ ಎಲ್ಲ ಅಕ್ರಮಬಾಂಗ್ಲಾ ನಿವಾಸಿಗಳನ್ನು ಹೊರಗೆ ಹಾಕುತ್ತಾರೆ. ಆಗ ಅಲ್ಲಿರುವ ಅಗ್ರಮ ಬಾಂಗ್ಲಾ ನಿವಾಸಿಗಳು ವಾಪಸ್ ಬಂದಲ್ಲಿ ಅವರ ನಿರ್ಹವಣೆ ಕಷ್ಟವಾಗಲಿದೆ ಎಂದು ಸಂಸದ ಹೇಳಿದ್ದಾನೆ. ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ತೃಣಮೂಲ ಕಾಂಗ್ರೆಸ್ (TMC) ವಿರುದ್ಧ ಗಂಭೀರ ವಾಗ್ದಾಳಿ ನಡೆಸಿದ್ದಾರೆ.

ಏನಿದು ವಿವಾದ?

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬಾಂಗ್ಲಾದೇಶದ ಸಂಸದ ಅಖ್ತರ್ ಹುಸೇನ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹುಸೇನ್ ಅವರು ಬಾಂಗ್ಲಾದೇಶದ ಸಂಸತ್ತಿನಲ್ಲಿ ಮಾತನಾಡುತ್ತಾ, 'ಪಶ್ಚಿಮ ಬಂಗಾಳದಲ್ಲಿ ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಒಳನುಸುಳುವಿಕೆ ಸಂಪೂರ್ಣವಾಗಿ ನಿಲ್ಲುತ್ತದೆ ಮತ್ತು ಅಲ್ಲಿರುವ ಬಾಂಗ್ಲಾದೇಶಿ ಮುಸ್ಲಿಮರನ್ನು ಹೊರಹಾಕಲಾಗುತ್ತದೆ' ಎಂದು ಹೇಳಿರುವುದು ಕೇಳಿಬಂದಿದೆ.

ಈ ವಿಡಿಯೋವನ್ನು ಹಂಚಿಕೊಂಡಿರುವ ದುಬೆ, 'ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ತೃಣಮೂಲ ಕಾಂಗ್ರೆಸ್‌ನ ಗುಪ್ತ ಹಿತೈಷಿಗಳು ಈಗ ಮೆಲ್ಲನೆ ಹೊರಬರುತ್ತಿದ್ದಾರೆ' ಎಂದು ಟೀಕಿಸಿದ್ದಾರೆ. ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷವು ಮತಬ್ಯಾಂಕ್ ರಾಜಕಾರಣಕ್ಕಾಗಿ ಒಳನುಸುಳುವಿಕೆಯನ್ನು ಪ್ರೋತ್ಸಾಹಿಸುತ್ತಿದೆ ಎಂಬ ಬಿಜೆಪಿಯ ಹಳೆಯ ಆರೋಪಕ್ಕೆ ಈ ವಿಡಿಯೋ ಈಗ ಹೊಸ ಆಯಾಮ ನೀಡಿದೆ.

ಒಳನುಸುಳುವಿಕೆ: ರಾಜಕೀಯ ಜಿದ್ದಾಜಿದ್ದಿನ

ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸೆ ಅಥವಾ ಒಳನುಸುಳುವಿಕೆ ಎಂಬುದು ದಶಕಗಳ ಕಾಲದ ಸೂಕ್ಷ್ಮ ವಿಷಯ. ಬಿಜೆಪಿ ಇದನ್ನು ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿ ನೋಡುತ್ತಿದ್ದರೆ, ಟಿಎಂಸಿ ಇದನ್ನು ಕೇಂದ್ರ ಸರ್ಕಾರದ ವೈಫಲ್ಯ ಎಂದು ತಿರುಗೇಟು ನೀಡುತ್ತಿದೆ. 'ಗಡಿ ಭದ್ರತಾ ಪಡೆ (BSF) ಕೇಂದ್ರದ ಅಧೀನದಲ್ಲಿದೆ, ಹಾಗಿದ್ದ ಮೇಲೆ ಒಳನುಸುಳುವಿಕೆ ತಡೆಯಲು ಕೇಂದ್ರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ?' ಎಂಬುದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯ ಪ್ರಶ್ನೆ. ಆದರೆ, ಬಾಂಗ್ಲಾ ಸಂಸದನ ಈ ವಿಡಿಯೋ ಬಿಜೆಪಿಗೆ ದೊಡ್ಡ ಅಸ್ತ್ರವಾಗಿ ಸಿಕ್ಕಂತಾಗಿದೆ.

ಎಕ್ಸಿಟ್ ಪೋಲ್‌ಗಳು ಏನು ಹೇಳುತ್ತವೆ?

ಬಂಗಾಳದಲ್ಲಿ ಈಗಾಗಲೇ ಎರಡು ಹಂತಗಳ ಮತದಾನ ಮುಕ್ತಾಯಗೊಂಡಿದ್ದು, ವಿವಿಧ ಸಂಸ್ಥೆಗಳ ಎಕ್ಸಿಟ್ ಪೋಲ್‌ಗಳು ಕುತೂಹಲಕಾರಿ ಫಲಿತಾಂಶಗಳನ್ನು ಭವಿಷ್ಯ ನುಡಿದಿವೆ:

ಮ್ಯಾಟ್ರಿಜ್ (Matrize): ಬಿಜೆಪಿ 146–161 ಸ್ಥಾನಗಳು, ಟಿಎಂಸಿ 125–140 ಸ್ಥಾನಗಳು.

ಜೆವಿಸಿ (JVC): ಬಿಜೆಪಿ 138–159, ಟಿಎಂಸಿ 131–152 ಸ್ಥಾನಗಳು.

ಪಿ-ಮಾರ್ಕ್ (P-Marq): ಬಿಜೆಪಿ 150–175 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

ಪೀಪಲ್ ಪಲ್ಸ್ (People Pulse): ಇದು ಟಿಎಂಸಿಗೆ ಸ್ಪಷ್ಟ ಬಹುಮತ ನೀಡಿದ್ದು, 177–187 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ.

ಹೀಗೆ ಪ್ರತಿಯೊಂದು ಎಕ್ಸಿಟ್ ಪೋಲ್‌ಗಳು ಭಿನ್ನ ಫಲಿತಾಂಶಗಳನ್ನು ನೀಡುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ತೀರ್ಪು ಯಾರ ಪರ?

ಬಾಂಗ್ಲಾ ಸಂಸದನ ಹೇಳಿಕೆ ಮತ್ತು ಒಳನುಸುಳುವಿಕೆಯ ಸುತ್ತ ನಡೆಯುತ್ತಿರುವ ಈ ಆರೋಪ-ಪ್ರತ್ಯಾರೋಪಗಳು ಮತದಾರರ ಮೇಲೆ ಯಾವ ರೀತಿ ಪ್ರಭಾವ ಬೀರಲಿವೆ ಎಂಬುದು ಸದ್ಯದ ಪ್ರಶ್ನೆ. ದೇಶದ ಗಮನ ಸೆಳೆದಿರುವ ಪಶ್ಚಿಮ ಬಂಗಾಳದ ಈ ಚುನಾವಣಾ ಸಮರದ ಅಂತಿಮ ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಅಂದು ಬಂಗಾಳದ ಗದ್ದುಗೆ ಯಾರ ಪಾಲಾಗಲಿದೆ ಮತ್ತು ಈ ವಿವಾದಗಳು ಚುನಾವಣಾ ಫಲಿತಾಂಶದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿವೆ ಎಂಬುದು ಸ್ಪಷ್ಟವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತುಮಕೂರಲ್ಲಿ ನವಿಲುಗಳ ಸರಣಿ ಸಾವಿನ ಸತ್ಯಾಂಶ ಬಹಿರಂಗ, ಸಾರ್ವಜನಿಕರಿಗೆ ಜಾಗೃತಿ, ಹೈ ಅಲರ್ಟ್
ಬೆಂಗಳೂರಿನಲ್ಲಿ ಅಮೆರಿಕದ ಸೆಮಿಕಂಡಕ್ಟರ್ ದೈತ್ಯ: ಅಪ್ಲೈಡ್ ಮೆಟೀರಿಯಲ್ಸ್‌ಗೆ 140 ಎಕರೆ ಜಮೀನು ನೀಡಲು ರಾಜ್ಯ ಸರ್ಕಾರ ಅಸ್ತು!