
ನವದೆಹಲಿ (ಡಿ.04): ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಲಂ (ಎಲ್ಟಿಟಿಇ) ಹೇಳಿಕೊಂಡಿದೆ.
ಎಲ್ಟಿಟಿಯ ರಾಜಕೀಯ ಘಟಕದ ಪ್ರತಿನಿಧಿ ಕುರ್ಬುರನ್ ಗುರುಸ್ವಾಮಿ ಮತ್ತು ಕಾನೂನು ಘಟಕದ ಪ್ರತಿನಿಧಿ ಲತನ್ ಚಂದ್ರಲಿಂಗಂ ಅವರ ಸಹಿ ಇರುವ ಪತ್ರದಲ್ಲಿ ಈ ಹೇಳಿಕೆ ನೀಡಲಾಗಿದೆ. ಎಲ್ಟಿಟಿಇ ತಮಿಳು ಜನರಿಗಾಗಿ ಇರುವ ಸಂಘಟನೆಯಾಗಿದೆ. ರಾಜೀವ್ ಗಾಂಧಿ ಅವರ ಹತ್ಯೆಯಲ್ಲಿ ತಮ್ಮ ಸಂಘಟನೆ ಭಾಗಿಯಾಗಿಲ್ಲ ಎಂಬುದಕ್ಕೆ ಆಗಾಗ ಸಾಕ್ಷ್ಯಗಳನ್ನು ಬಿಡುಗಡೆ ಮಾಡುತ್ತಲೇ ಇದ್ದೇವೆ. ಆದರೂ ಸುಳ್ಳು ಆರೋಪವನ್ನು ನಮ್ಮ ವಿರುದ್ಧ ಹೊರಿಸಲಾಗಿದೆ.
ಮಾನಹಾನಿಕರ ಪ್ರಚಾರದಿಂದಾಗಿ ನಮ್ಮ ಜನರು ಅಸ್ಥಿರತೆಗೆ ತಳ್ಳಲ್ಪಟ್ಟಿದ್ದಾರೆ. ನಾವು ಭಾರತದ ನಾಯಕತ್ವವನ್ನು ನಾಶ ಮಾಡುವ ಅಥವಾ ಭಾರತದ ಮೇಲೆ ದಾಳಿ ಮಾಡುವ ಉದ್ದೇಶ ಹೊಂದಿಲ್ಲ. ನಾವು ಯಾವತ್ತೂ ಶ್ರೀಲಂಕಾ ಹೊರತಾದ ನಾಯಕರ ವಿರುದ್ಧ ಗನ್ ಹಿಡಿದಿಲ್ಲ. ಭಾರತದ ಯಾವುದೇ ಮುಖಂಡರ ವಿರುದ್ಧವೂ ನಾವು ಸಂಚು ರೂಪಿಸಿಲ್ಲ. ಎಲ್ಟಿಟಿಇ ಹಾಗೂ ಭಾರತ ಸರ್ಕಾರದ ನಡುವಿನ ಸಂಬಂಧ ನಾಶ ಮಾಡಲು ಪೂರ್ವ ಯೋಜಿತ ಸಂಚು ರೂಪಿಸಿ ರಾಜೀವ್ ಗಾಂಧಿ ಅವರ ಹತ್ಯೆ ಮಾಡಲಾಗಿದೆ ಎಂದು ಎಲ್ಟಿಟಿ ತನ್ನ ಪತ್ರದಲ್ಲಿ ಆರೋಪಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.