ನಾವು ಮಾಧ್ಯಮ ಸ್ವಾತಂತ್ರವನ್ನು ಗೌರವಿಸುತ್ತೇವೆ: ಎನ್'ಡಿಟಿವಿ ದಾಳಿಗೆ ಸಿಬಿಐ ಸ್ಪಷ್ಟನೆ

Published : Jun 06, 2017, 08:53 PM ISTUpdated : Apr 11, 2018, 12:38 PM IST
ನಾವು ಮಾಧ್ಯಮ ಸ್ವಾತಂತ್ರವನ್ನು ಗೌರವಿಸುತ್ತೇವೆ: ಎನ್'ಡಿಟಿವಿ ದಾಳಿಗೆ ಸಿಬಿಐ ಸ್ಪಷ್ಟನೆ

ಸಾರಾಂಶ

ಎನ್ ಡಿಟಿವಿ ಮುಖ್ಯುಸ್ಥ ಪ್ರಣಯ್ ರಾಯ್ ಮನೆ ಮೇಲೆ ಸಿಬಿಐ ದಾಳಿ ಮಾಡಿರುವುದು ಮಾಧ್ಯಮ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನ ಎನ್ನಲಾಗುತ್ತಿರುವ ಆರೋಪಕ್ಕೆ ಸಿಬಿಐ ಸ್ಪಷ್ಟನೆ ನೀಡಿದೆ. ಮಾಧ್ಯಮ ಸ್ವಾತಂತ್ರವನ್ನು ನಾವು ಗೌರವಿಸುತ್ತೇವೆ. ಎನ್ ಡಿಟಿವಿ ನೊಂದಣಿ ಕಚೇರಿ, ಸ್ಟುಡಿಯೋ, ನ್ಯೂಸ್ ರೂಮ್ ಹಾಗೂ ಆವರಣದ ಮೇಲೆ ದಾಳಿ ನಡೆಸಿಲ್ಲ. ಮಾಧ್ಯಮ ಸ್ವಾತಂತ್ರವನ್ನು ಗೌರವಿಸುತ್ತೇವೆ. ಎಂದು ಸಿಬಿಐ ಹೇಳಿದೆ.

ನವದೆಹಲಿ (ಜೂ.06):ಎನ್ ಡಿಟಿವಿ ಮುಖ್ಯುಸ್ಥ ಪ್ರಣಯ್ ರಾಯ್ ಮನೆ ಮೇಲೆ ಸಿಬಿಐ ದಾಳಿ ಮಾಡಿರುವುದು ಮಾಧ್ಯಮ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನ ಎನ್ನಲಾಗುತ್ತಿರುವ ಆರೋಪಕ್ಕೆ ಸಿಬಿಐ ಸ್ಪಷ್ಟನೆ ನೀಡಿದೆ. ಮಾಧ್ಯಮ ಸ್ವಾತಂತ್ರವನ್ನು ನಾವು ಗೌರವಿಸುತ್ತೇವೆ. ಎನ್ ಡಿಟಿವಿ ನೊಂದಣಿ ಕಚೇರಿ, ಸ್ಟುಡಿಯೋ, ನ್ಯೂಸ್ ರೂಮ್ ಹಾಗೂ ಆವರಣದ ಮೇಲೆ ದಾಳಿ ನಡೆಸಿಲ್ಲ. ಮಾಧ್ಯಮ ಸ್ವಾತಂತ್ರವನ್ನು ಗೌರವಿಸುತ್ತೇವೆ. ಎಂದು ಸಿಬಿಐ ಹೇಳಿದೆ.

ಸಿಬಿಐ ನ ಇಮೇಜ್ ಗೆ ಧಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಕಾನೂನಿನ ಅಡಿಯಲ್ಲಿ ತನಿಖೆ ನಡೆಸಲಾಗಿದೆ. ತನಿಖಾ ವರದಿಯನ್ನು ಸಾಕ್ಷಿ ಸಮೇತ ನ್ಯಾಯಾಲಯದಲ್ಲಿ ಸಲ್ಲಿಸಲಾಗುವುದು. ಐಸಿಐಸಿಐ ಬ್ಯಾಂಕ್ ಶೇರ್ ಹೋಲ್ಡರ್ ನೀಡಿರುವ ದೂರಿನ ಆಧಾರದ ಮೇಲೆ ನ್ಯಾಯಾಲಯ ವಾರಂಟ್ ನೀಡಿತ್ತು. ಇದರ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ಎನ್ ಡಿಟಿವಿ ಮುಖ್ಯಸ್ಥ ಪ್ರಣಯ್ ರಾಯ್ 48 ಕೋಟಿ ಪಾವತಿಸದೇ ಬ್ಯಾಂಕ್ ಗೆ ನಷ್ಟವನ್ನುಂಟು ಮಾಡಿ ತಾವು ಅಕ್ರಮ ಗಳಿಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉಡುಪಿ: ವರನಿಗೆ ರಜೆ ಸಿಗದ ಕಾರಣ ವಿಡಿಯೋ ಮೂಲಕ ಅದ್ಧೂರಿ ನಿಶ್ಚಿತಾರ್ಥ! ಫೋಟೋ ಇಲ್ಲಿವೆ ನೋಡಿ
ಕಡಿಮೆ ಬಿಯರ್ ಉತ್ಪಾದನೆಗೆ ಯುಬಿ ಕಂಪನಿಗೆ ವಿಧಿಸಿದ್ದ 29 ಕೋಟಿ ರೂ. ದಂಡ ರದ್ದು!