ನನ್ನ ಅಜ್ಜಿ, ಕುಟುಂಬದವರೆಲ್ಲ ಶಿವ ಭಕ್ತರು, ಆದರೆ ನಾವು ಧರ್ಮದ ದಲ್ಲಾಳಿಗಳಲ್ಲ

Published : Dec 01, 2017, 02:59 PM ISTUpdated : Apr 11, 2018, 12:41 PM IST
ನನ್ನ ಅಜ್ಜಿ, ಕುಟುಂಬದವರೆಲ್ಲ ಶಿವ ಭಕ್ತರು, ಆದರೆ ನಾವು ಧರ್ಮದ ದಲ್ಲಾಳಿಗಳಲ್ಲ

ಸಾರಾಂಶ

ನಮ್ಮ ನಂಬಿಕೆ ನಮ್ಮ ಖಾಸಗಿ ವಿಷಯ. ಈ ವಿಷಯದ ಬಗ್ಗೆ ನಾವು ಯಾರೊಬ್ಬರಿಗೂ ಪ್ರಮಾಣಪತ್ರ ನೀಡಬೇಕಾಗಿಲ್ಲ.

ವಡೋದರಾ(ಡಿ.01): ಸೋಮನಾಥ್ ದೇಗುಲ ಭೇಟಿಯ ಸಂದರ್ಭದಲ್ಲಿ ಹಿಂದೂಯೇಯರ ಧರ್ಮದ ವಿವಾದ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ನನ್ನ ಅಜ್ಜಿ ಹಾಗೂ ನನ್ನ ಕುಟುಂಬದವರೆಲ್ಲ ಶಿವಭಕ್ತರು. ಇಂತಹ ಸಂಗತಿಗಳನ್ನು ಖಾಸಗಿಯಾಗಿ ಇರಿಸಲಾಗುತ್ತದೆ. ಈ ರೀತಿಯ ವಿಷಯಗಳ ಬಗ್ಗೆ ನಾವು ಮಾತನಾಡುವುದಿಲ್ಲ. ನಮ್ಮ ಧರ್ಮ ನಮ್ಮ ಖಾಸಗಿ ವಿಷಯ' ಎಂದು ವಡೋದರದಲ್ಲಿ ವ್ಯಾಪಾರಿಗಳೊಂದಿಗೆ ನಡೆದ ಸಮಾರಂಭದಲ್ಲಿ ತಿಳಿಸಿದರು.

ನಮ್ಮ ನಂಬಿಕೆ ನಮ್ಮ ಖಾಸಗಿ ವಿಷಯ. ಈ ವಿಷಯದ ಬಗ್ಗೆ ನಾವು ಯಾರೊಬ್ಬರಿಗೂ ಪ್ರಮಾಣಪತ್ರ ನೀಡಬೇಕಾಗಿಲ್ಲ. ನಾವು ಧರ್ಮದ ದಲ್ಲಾಳಿಗಳಲ್ಲ. ಇಂತಹ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ನಾವು ಇಚ್ಚಿಸುವುದಿಲ್ಲ' ಎಂದು ಹೇಳಿದರು. ಇತ್ತೀಚಿಗೆ 2 ದಿನಗಳ ಹಿಂದಷ್ಟೆ ರಾಹುಲ್ ಗಾಂಧಿ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ್ದಾಗ ಹಿಂದುಯೇತರ ಪುಸ್ತಕದಲ್ಲಿ ಅವರ ಹೆಸರು ನಮೂದಾಗಿ ವಿವಾದವುಂಟಾಗಿತ್ತು. ಆದರೆ ರಾಹುಲ್ ಗಾಂಧಿ ನಮೂದಿಸಲಿರಲಿಲ್ಲ' ಎಂದು ಕಾಂಗ್ರೆಸ್ ಸ್ಪಷ್ಟನೆ ನಿಡಿತ್ತು. ಹಲವು ದಿನಗಳಿಂದ ರಾಹುಲ್ ಗಾಂಧಿಯವರ ಮೂಲ ಧರ್ಮದ ಬಗ್ಗೆ ಚರ್ಚೆಗಳಾಗುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?