
ಹೈದರಾಬಾದ್(ನ.28) ಸೆ. 10 ರಿಂದ ಅ.30ರವರೆಗೆ ಆಂಧ್ರಪ್ರದೇಶವು ತೆಲಂಗಾಣಕ್ಕೆ ಬಿಟ್ಟ ಒಟ್ಟಾರೆ 195 ಟಿಎಂಸಿ ನೀರಿನ ಪೈಕಿ 44 ಟಿಎಂಸಿ ನೀರು ‘ನಾಪತ್ತೆ’ಯಾದ ವಿಚಿತ್ರ ವಿದ್ಯಮಾನ ನಡೆದಿದೆ.
ಈ ಅವಧಿಯಲ್ಲಿ ಆಂಧ್ರವು ಶ್ರೀ ಶೈಲ ಅಣೆಕಟ್ಟೆ ಯಿಂದ ತೆಲಂಗಾಣದ ನಾಗಾರ್ಜುನ ಸಾಗರ ಅಣಕಟ್ಟೆಗೆ 195 ಟಿಎಂಸಿ ನೀರು ಬಿಡುಗಡೆ ಮಾಡಿತ್ತು. ಆದರೆ ಈ ಪೈಕಿ ನಾಗಾರ್ಜುನ ಸಾಗರ ಅಣೆಕಟ್ಟೆಗೆ ಬಂದ ನೀರಿನ ಪ್ರಮಾಣ 151 ಟಿಎಂಸಿ ಮಾತ್ರ. ಮಾರ್ಗ ಮಧ್ಯೆ 10 ಟಿಎಂಸಿ ನೀರು ಆವಿಯಾಯಿತು ಎಂದು ಸುಮ್ಮನಾಗಬಹುದಾದರೂ ಇನ್ನುಳಿದ 34 ಟಿಎಂಸಿ ನೀರು ಎಲ್ಲಿ ಹೋಯಿತು ಎಂದು ನಾಗಾರ್ಜುನಸಾಗರ ಮುಖ್ಯ ಎಂಜಿನಿಯರ್ ಸುನೀಲ್ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.