ವಿವಿ ಪ್ಯಾಟ್‌ ಆಯ್ತು, ಈಗ ವಿವಿಪ್ಯಾಟ್‌ ರಸೀದಿ ಪತ್ತೆ..!

Published : Jun 01, 2018, 09:44 AM IST
ವಿವಿ ಪ್ಯಾಟ್‌ ಆಯ್ತು, ಈಗ ವಿವಿಪ್ಯಾಟ್‌ ರಸೀದಿ ಪತ್ತೆ..!

ಸಾರಾಂಶ

ಬಸವನ​ಬಾಗೇ​ವಾಡಿ ಕ್ಷೇತ್ರ ವ್ಯಾಪ್ತಿಯ ಉಕ್ಕಲಿ ಗ್ರಾಮದ ಮತಗಟ್ಟೆಸಂಖ್ಯೆ 12ಕ್ಕೆ ಸೇರಿದ ರಶೀದಿ ಇದಾ​ಗಿ​ದೆ. ಮತ​ಯಂತ್ರ​ದ ಮೂಲ​ಕ ವೋಟ್‌ ಹಾಕಿದ ಬಳಿಕ ನಾವು ನಿರ್ದಿಷ್ಟ ಅಭ್ಯ​ರ್ಥಿಗೇ ವೋಟ್‌ ಹಾಕಿ​ದ್ದೇವೆ ಎನ್ನು​ವು​ದನ್ನು ಖಚಿ​ತ​ಪ​ಡಿ​ಸುವ ವಿವಿ ಪ್ಯಾಟ್‌ನ ರಶೀದಿ ಇದಾ​ಗಿದೆ. ಈ ರಶೀದಿ ಬಹಿ​ರಂಗ​ವಾದ ಹಿನ್ನೆ​ಲೆ​ಯಲ್ಲಿ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.

ಬಸವನಬಾಗೇವಾಡಿ[ಜೂ.01]: ವಿಜ​ಯ​ಪುರ ಜಿಲ್ಲೆ​ಯ ಮನ​ಗೂ​ಳಿ​ಯ ಶೆಡ್‌​ವೊಂದ​ರಲ್ಲಿ ಇತ್ತೀಚೆಗಷ್ಟೇ ವಿವಿ ಪ್ಯಾಟ್‌ ಮಷಿ​ನ್‌​ನ ಬಾಕ್ಸ್‌ ಪತ್ತೆಯಾದ ಬೆನ್ನಲ್ಲೇ ಈಗ ವಿವಿ ಪ್ಯಾಟ್‌ ರಶೀದಿ ಪತ್ತೆಯಾಗಿರುವ ಘಟನೆಯೊಂದು ಬೆಳ​ಕಿಗೆ ಬಂದಿ​ದೆ.
ಬಸವನ​ಬಾಗೇ​ವಾಡಿ ಕ್ಷೇತ್ರ ವ್ಯಾಪ್ತಿಯ ಉಕ್ಕಲಿ ಗ್ರಾಮದ ಮತಗಟ್ಟೆಸಂಖ್ಯೆ 12ಕ್ಕೆ ಸೇರಿದ ರಶೀದಿ ಇದಾ​ಗಿ​ದೆ. ಮತ​ಯಂತ್ರ​ದ ಮೂಲ​ಕ ವೋಟ್‌ ಹಾಕಿದ ಬಳಿಕ ನಾವು ನಿರ್ದಿಷ್ಟ ಅಭ್ಯ​ರ್ಥಿಗೇ ವೋಟ್‌ ಹಾಕಿ​ದ್ದೇವೆ ಎನ್ನು​ವು​ದನ್ನು ಖಚಿ​ತ​ಪ​ಡಿ​ಸುವ ವಿವಿ ಪ್ಯಾಟ್‌ನ ರಶೀದಿ ಇದಾ​ಗಿದೆ. ಈ ರಶೀದಿ ಬಹಿ​ರಂಗ​ವಾದ ಹಿನ್ನೆ​ಲೆ​ಯಲ್ಲಿ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಚುನಾವಣಾ ಆಯೋಗ ಸೂಕ್ತ ತನಿಖೆ ನಡೆ​ಸ​ಬೇ​ಕೆಂದು ಕ್ಷೇತ್ರದ ಪರಾಜಿತ ಜೆಡಿ​ಎಸ್‌ ಅಭ್ಯರ್ಥಿ ಸೋಮನಗೌಡ ಪಾಟೀಲ ಮನಗೂಳಿ ಅವರು ಚುನಾ​ವಣಾ ಆಯೋ​ಗಕ್ಕೆ ಬುಧವಾರ ಬೆಂಗಳೂರಿನಲ್ಲಿ ಲಿಖಿತ ದೂರು ಸಲ್ಲಿಸಿದ್ದಾರೆ.
ತಾಲೂಕಿನ ಮನಗೂಳಿ ಪಟ್ಟಣದ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶೆಡ್‌ವೊಂದರಲ್ಲಿ ಮೇ 20ರಂದು ಎಂಟು ವಿವಿ ಪ್ಯಾಟ್‌ ಯಂತ್ರದ ಬಾಕ್ಸ್‌​ಗ​ಳು ಪತ್ತೆಯಾಗಿದ್ದವು. ಇದು ಭಾರೀ ಚರ್ಚೆಗೆ ಕಾರ​ಣ​ವಾ​ಗಿತ್ತು. ಈಗ ಮೇ 27ರಂದು ಇದೇ ಮತಕ್ಷೇತ್ರಕ್ಕೆ ಸೇರಿದ ವಿವಿ ಪ್ಯಾಟ್‌ನ ಮುದ್ರಿತ ರಶೀದಿ ಸಿಕ್ಕಿ​ರು​ವುದು ಸಾರ್ವ​ಜ​ನಿ​ಕರ ಗೊಂದ​ಲ​ವನ್ನು ಮತ್ತಷ್ಟುಹೆಚ್ಚಿ​ಸಿದೆ. ವಿವಿ ಪ್ಯಾಟ್‌ನ ಮುದ್ರಿತ ರಶೀದಿ ಕುರಿತು ಬಸವನಬಾಗೇವಾಡಿ ಮತಕ್ಷೇತ್ರದ ಚುನಾವಣಾಧಿಕಾರಿಗಳು ಗುರುವಾರ ಮನಗೂಳಿ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿ​ಸಿ​ದ್ದಾ​ರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಳಿ ಕಟ್ಟುವ ಶುಭ ವೇಳೆ..., 'ಇವನು ನನ್ನ ಗಂಡ' ಎಂದವಳೊಂದಿಗೆ ಸಂಸಾರ ನಡೆಸುತ್ತೇನೆ ಎಂದ ಮದುಮಗ!
ಬೆಂಗಳೂರು ಜನತೆಗೆ ಶೀಘ್ರವೇ ದೊಡ್ಡ ಮುಕ್ತಿ, ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಮುಂದಿನ ತಿಂಗಳೊಳಗೆ ಸಂಚಾರ ಮುಕ್ತ!