
ಬೆಂಗಳೂರು (ಮಾ. 26): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನರ ಗುಂಪೊಂದಕ್ಕೆ ರಾಜಾರೋಷವಾಗಿ ಹಣ ಹಂಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ಐ ಸಪೋರ್ಟ್ ರವೀಶ್ ಕುಮಾರ್’ ಎಂಬ ಹೆಸರಿನ ಫೇಸ್ಬುಕ್ ಪೇಜ್ ಮೊದಲಿಗೆ ಈ ವಿಡಿಯೋ ಶೇರ್ ಮಾಡಿ, ‘ಚುನಾವಣಾಧಿಕಾರಿ ಎಲ್ಲಿ?’ ಎಂದು ಬರೆದುಕೊಂಡಿದೆ. ವಿಡಿಯೋದಲ್ಲಿ ಆದಿತ್ಯನಾಥ್ ಸಮ್ಮುಖದಲ್ಲಿ ಮುಖಂಡರೊಬ್ಬರು ದುಡ್ಡು ಹಂಚುತ್ತಿರುವ ದೃಶ್ಯವಿದೆ. ಆದರೆ ಈ ವಿಡಿಯೋದ ಅಸಲಿಯತ್ತನ್ನು ಕ್ವಿಂಟ್ ಸುದ್ದಿ ಸಂಸ್ಥೆ ಬಯಲಿಗೆಳೆದಿದೆ.
ರಿವರ್ಸ್ ಇಮೇಜ್ನಲ್ಲಿ ಪರಿಶೀಲಿಸಿದಾಗ ಇದು ಹಳೆಯ ವಿಡಿಯೋ ಎಂದು ತಿಳಿದುಬಂದಿದೆ. ಯುಟ್ಯೂಬ್ನಲ್ಲಿ ಮೂಲ ವಿಡಿಯೋ ಇದ್ದು, ಇದನ್ನು ಅಪ್ಲೋಡ್ ಮಾಡಿದವರನ್ನು ಸಂಪರ್ಕಿಸಿದಾಗ ಸತ್ಯ ಬಯಲಾಗಿದೆ. ವಾಸ್ತವವಾಗಿ 2012 ಏಪ್ರಿಲ್ನಲ್ಲಿ ಉತ್ತರಪ್ರದೇಶದ ಗೋರಖ್ಪುರದಲ್ಲಿ ಹಲವು ಜಮೀನುಗಳು ಸುಟ್ಟು ಹೋಗಿದ್ದವು. ಈ ವೇಳೆ ಇಲ್ಲಿನ ಸಂಸದರಾಗಿದ್ದ ಯೋಗಿ, ಸ್ಥಳಕ್ಕೆ ಭೇಟಿ ನೀಡಿ ಬೆಳೆ ಕಳೆದುಕೊಂಡ ರೈತರಿಗೆ ತಾವಾಗಿಯೇ ಖುದ್ದು ಧನಸಹಾಯ ಮಾಡಿದ್ದರು. ಬೆಳೆ ಹಾನಿ ಆಧಾರದ ಮೇಲೆ 1000, 2000 ರು. ಹಂಚಿದ್ದರು. ಆ ವಿಡಿಯೋವನ್ನು ಸದ್ಯ ಚುನಾವಣೆ ಎದುರಾಗಿರುವುದರಿಂದ ಮತದಾರರಿಗೆ ಹಣ ಹಂಚುತ್ತಿದ್ದಾರೆಂದು ಸುಖ್ಳು ಸುದ್ದಿ ಹಬ್ಬಿಸಲಾಗುತ್ತಿದೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.