
ಧಾರವಾಡ: ಸಚಿವ ವಿನಯ್ ಕುಲಕರ್ಣಿ ಈಗಲೂ ಸಹ ಸುಮ್ಮನೇ ಕುಳಿತಿಲ್ಲ, ಯೋಗೀಶ್ ಗೌಡ ಪತ್ನಿ ಜತೆ ರಾಜೀಸಂಧಾನಕ್ಕೆ ಯತ್ನಿಸುತ್ತಿದ್ದಾರೆ ಎಂಬ ಅನುಮಾನಗಲು ಹುಟ್ಟಿಕೊಂಡಿವೆ. ಏಕೆಂದರೆ ಮಲ್ಲಮ್ಮ ದಾಖಲಾಗಿರುವ ಆಸ್ಪತ್ರೆಗೆ ಸಚಿವರ ಪತ್ನಿ ನಿನ್ನೆ ಭೇಟಿ ನೀಡಿದ್ದಾರೆ.
ಗಣಿ ಸಚಿವ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ನಿನ್ನೆ ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಲ್ಲಮ್ಮ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೇ ಭೇಟಿ ನೀಡಿ ಆಸ್ಪತ್ರೆ ಒಳಗೆ ಅರ್ಧ ಗಂಟೆ ಕಳೆದರೂ ಮಲ್ಲಮ್ಮ ವಾರ್ಡ್ ಕಡೆಗೆ ಹೋಗಲಿಲ್ಲ.
ಧಾರವಾಡದ ಕೆಲಗೇರಿ ರಸ್ತೆಯ ಡಾ.ಎಸ್.ಆರ್.ಜಂಬಗಿ ಅವರ ಶ್ರವ್ಯಾ ಆಸ್ಪತ್ರೆಯಲ್ಲಿ ಮಲ್ಲಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ಮಲ್ಲಮ್ಮ ಇರುವ ಆಸ್ಪತ್ರೆಗೆ ಶಿವಲೀಲಾ ಯಾಕೆ ಬಂದರು? ಭಾವನಾತ್ಮಕವಾಗಿ ಅಥವಾ ಹೇಗಾದರೂ ಮಾಡಿ ರಾಜೀ ಸಂಧಾನ ಮಾಡಬೇಕೆಂದು ಸಚಿವರು ಯತ್ನಿಸುತ್ತಿದ್ದಾರೆಯೇ? ? ವೈದ್ಯರ ಮೂಲಕ ಯೋಗೀಶ್ ಪತ್ನಿ ಮಲ್ಲಮ್ಮ ಜತೆ ರಾಜೀ ಸಂಧಾನ ಮಾಡುವ ಇರಾದೆ ಇದೆಯೇ ಎಂಬ ಗುಮಾನಿ ಹುಟ್ಟಿಕೊಂಡಿದೆ. ಸಚಿವ ಮಲ್ಲಮ್ಮ ಕುಟುಂಬಸ್ಥರಿಗೂ ಈ ಬೆಳವಣಿಗೆ ಬಗ್ಗೆ ಅಚ್ಚರಿ, ಆತಂಕ ಉಂಟಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.