
ಬೆಂಗಳೂರು(ಡಿ.12): ಸಚಿವ ಎಚ್.ವೈ.ಮೇಟಿ ವಿರುದ್ಧ ರಾಸಲೀಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮಿ ಸ್ಪಷ್ಟಿಕರಣ ನೀಡಿದ್ದು, ಹೆಚ್.ವೈ.ಮೇಟಿ ಜೊತೆ ಮಾಡಿರೋ ನನ್ನ ಸಂಬಂಧ ಸುಳ್ಳು. ಮೇಟಿ ಮತ್ತು ನನ್ನ ನಡುವೆ ಯಾವುದೇ ಅಕ್ರಮ ಸಂಬಂಧವಿಲ್ಲ' ಎಂದು ತಿಳಿಸಿದ್ದಾರೆ.
ಮೇಟಿಯವರು ನನ್ನ ಸಂಬಂಧ ತಂದೆ ಮಗಳ ಸಂಬಂಧ. ಮೇಟಿ ಮಕ್ಕಳು ನನ್ನ ಸಹೋದರ ಮತ್ತು ಸಹೋದರರಿದ್ದ ಹಾಗೆ. ನನ್ನ ವಿರುದ್ಧ ಮಾಡಿರೋ ಆರೋಪದಿಂದ ನಾನು ನೊಂದಿದ್ದೇನೆ.ನಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆಡಿಯೋ ಮತ್ತು ವಿಡಿಯೋದಲ್ಲಿರೋವವಳು ನಾನಲ್ಲ. ಇದೆಲ್ಲಾ ಯಾರೋ ಮಾಡಿರೋ ಷಡ್ಯಂತ್ರ. ಪ್ರಕರಣ ಸಂಬಂಧ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಎರಡು ದಿನದಲ್ಲಿ ಮಾಧ್ಯಮದ ಮುಂದೆ ಪ್ರಸ್ತಾಪಿಸುತ್ತೇನೆ' ಎಂದು ವಿಜಯಲಕ್ಷ್ಮಿತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.