ಸಿದ್ದರಾಮಯ್ಯರನ್ನು ಅಪಹರಿಸಲು ಪ್ರಯತ್ನಿಸಿದ್ದ ವೀರಪ್ಪನ್...!!!

Published : Oct 12, 2016, 07:11 AM ISTUpdated : Apr 11, 2018, 12:59 PM IST
ಸಿದ್ದರಾಮಯ್ಯರನ್ನು ಅಪಹರಿಸಲು ಪ್ರಯತ್ನಿಸಿದ್ದ ವೀರಪ್ಪನ್...!!!

ಸಾರಾಂಶ

1999ರ ಚುನಾವಣೆ ಪ್ರಚಾರ ವೇಳೆಯ ವಿಚಾರ ಬಹಿರಂಗಪಡಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು (ಅ.12): ದಂತಚೋರ ವೀರಪ್ಪನ್‌ 1999​ರಲ್ಲಿ ಸಿಎಂ ಸಿದ್ದರಾಮಯ್ಯ ಅವ​ರನ್ನೂ ಅಪಹರಿಸಲು ಯತ್ನಿಸಿ​ದ್ದನಂತೆ!

ಹೌದು. ಈ ವಿಚಾರವನ್ನು ಸ್ವತಃ ಮುಖ್ಯ​ಮಂತ್ರಿ ಸಿದ್ದರಾಮಯ್ಯ ಅವರೇ ಬಹಿರಂಗಪಡಿ​ಸಿದ್ದಾರೆ. ಮೈಸೂರಿನ ಮಾಧ್ಯಮ ಪ್ರತಿನಿಧಿ​ಗಳ ಜೊತೆ ಸೋಮವಾರ ಅನೌಪಚಾ​ರಿಕ​ವಾಗಿ ಮಾತ​ನಾ​ಡಿದ ಅವರು, ‘‘19​99ರ ಲೋಕಸಭಾ ಚುನಾ​ವಣೆ ವೇಳೆ ಚಾಮ​ರಾಜ​ನಗರ ಮೀಸಲು ಕ್ಷೇತ್ರದ ಪಕ್ಷದ ಅಭ್ಯರ್ಥಿ ಪರ ಕೊಳ್ಳೇ​ಗಾಲ ತಾಲೂ​ಕಿನ ಮಾರ್ಟಳ್ಳಿ ಸುತ್ತ​ಮುತ್ತ ಪ್ರ​ಚಾ​​ರಕ್ಕೆ ಹೋಗಿದ್ದೆ. ಆಗಲೇ ರಾತ್ರಿ​ಯಾ​ಗಿತ್ತು. ಪೊಲೀಸರು ಬಂದು, ವೀರ​ಪ್ಪನ್‌ ತಮ್ಮ ಅಪ​ಹರಣಕ್ಕೆ ಹೊಂಚು ಹಾಕಿ ಕುಳಿ​ತಿ​ರುವ ಮಾಹಿತಿ ಬಂದಿದೆ. ಹೀಗಾಗಿ ಈಗ​ಲೇ ಸ್ಥಳಬಿಟ್ಟು ಹೋಗುವಂತೆ ಸೂಚಿ​​ಸಿ​​ದರು. ಜತೆಗೆ 2 ಕೆಎಸ್‌ಆರ್‌ಪಿ ವ್ಯಾನ್‌ಗಳಲ್ಲಿದ್ದ ಪೊಲೀಸರ ಭದ್ರತೆ​ಯೊಂ​ದಿಗೆ ಕಳುಹಿಸಿ​ಕೊಟ್ಟರು. ಬಳಿಕ ನಾ​​ನು ಆ ಕಡೆ ಸುಳಿ​ಯಲೇ ಇಲ್ಲ. ಹೋ​ದ​ರೂ ಸಂಜೆ ವೇಳೆ ಹೋಗುತ್ತಿರಲಿಲ್ಲ'' ಎಂದು ಮುಗುಳ್ನಕ್ಕರು.

ವೀರಪ್ಪನ್‌ 2004ರ ಅ.18 ರಂದು ದಸರಾ ಸಂದರ್ಭದಲ್ಲಿ ತಮಿ​ಳುನಾಡಿನ ಪಾಪರಪಟ್ಟಿಎಂಬಲ್ಲಿ ತಮಿಳುನಾಡು ವಿಶೇಷ ಪಡೆಯ ಕಾರ್ಯಾಚರಣೆ ವೇಳೆ ಹತನಾದ. ಇದಾದ 12 ವರ್ಷ​ಗಳ ನಂತರ ಸಿದ್ದ ರಾಮಯ್ಯಅವರು ವೀರಪ್ಪನ್‌ನನ್ನು ನೆನಪಿಸಿಕೊಂಡಿರು​ವುದು ಹಾಗೂ 17 ವರ್ಷಗಳ ನಂತರ ತಮ್ಮ ಅಪಹರಣ ಯತ್ನದ ವಿಷಯ​ವನ್ನು ಬಹಿರಂಗಪಡಿಸಿರುವುದು ವಿಶೇಷ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!