ಉತ್ತರ ಪ್ರದೇಶದ ‘ಹಜ್ ಭವನ’ದ ಗೋಡೆಗಳಿಗೆ ಕೇಸರಿ ಬಣ್ಣ

Published : Jan 05, 2018, 05:37 PM ISTUpdated : Apr 11, 2018, 12:36 PM IST
ಉತ್ತರ ಪ್ರದೇಶದ ‘ಹಜ್ ಭವನ’ದ ಗೋಡೆಗಳಿಗೆ ಕೇಸರಿ ಬಣ್ಣ

ಸಾರಾಂಶ

ಕಟ್ಟಡದ ಸೌಂದರ್ಯವರ್ಧನೆಗೆ ಈ ಬಣ್ಣ ಹಚ್ಚಲಾಗಿದೆ ಯೋಗಿ ಆದಿತ್ಯನಾಥ್ ಹಾಗೂ ಉನ್ನತ ಅಧಿಕಾರಿಗಳ ಕಚೇರಿಗಳಿರುವ ಸೆಕ್ರೆಟರಿಯಾಟ್ ಕಟ್ಟಡಕ್ಕೂ ಕೇಸರಿ ಬಣ್ಣ

ಲಕ್ನೋ: ಉತ್ತರ ಪ್ರದೇಶದ ಹಜ್ ಭವನ ಆವರಣ ಗೋಡೆಗಳಿಗೆ ಶುಕ್ರವಾರ ‘ಕೇಸರಿ’ ಬಣ್ಣವನ್ನು ಬಳಿಯಲಾಗಿದೆ. ಕೇಸರಿ ಬಣ್ಣವು ಹಿಂದೂಗಳಿಗೆ ಪವಿತ್ರವಾಗಿದೆ.

ಆದರೆ ಇದರ ಬಗ್ಗೆ ಸ್ಪಷ್ಟೀಕರಣ ನೀಡಿರುವ ಯುಪಿ ಸಚಿವ ಮೊಹ್ಸಿನ್ ರಝಾ, ಕಟ್ಟಡದ ಸೌಂದರ್ಯವರ್ಧನೆಗೆ ಈ ಬಣ್ಣ ಹಚ್ಚಲಾಗಿದೆಯೆಂದು ಹೇಳಿದ್ದಾರೆ.

ಇದರಲ್ಲೇನು ವಿವಾದಾತ್ಮಕ ವಿಷಯವಿಲ್ಲ; ಕೇಸರಿ ಬಣ್ಣವು ಶಕ್ತಿಯುತ ಹಾಗೂ ಹೊಳೆಯುವ ಬಣ್ಣ, ಅದರಿಂದ ಕಟ್ಟಡವು ಸುಂದರವಾಗಿ ಕಾಣಿಸುತ್ತದೆ, ಎಂದು ಅವರು ಹೇಳಿದ್ದಾರೆ.

ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು ‘ಕೇಸರಿಕರಣ’ ನಡೆಸುತ್ತಿದೆಯೆಂದು  ಪ್ರತಿಪಕ್ಷಗಳು ಆರೋಪಿಸಿವೆ.

ಈ ಹಿಂದೆ, ಯೋಗಿ ಆದಿತ್ಯನಾಥ್ ಹಾಗೂ ಉನ್ನತ ಅಧಿಕಾರಿಗಳ ಕಚೇರಿಗಳಿರುವ ಸೆಕ್ರೆಟರಿಯಾಟ್ ಕಟ್ಟಡಕ್ಕೂ ಕೇಸರಿ ಬಣ್ಣ ಬಳಿಯಲಾಗಿದೆ.

(ಏಎನ್ಐ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?