
ಇಸ್ಲಾಮಾಬಾದ್(ಮೇ.27): ಅಣ್ವಸ್ತ್ರ ತಯಾರಿಕೆ ಮೇಲೆ ನಿರ್ಭಂಧ ಹೇರುವಂತೆ ವಿಶ್ವ ಸಮುದಾಯ ಭಾರತದ ಮೇಲೆ ಒತ್ತಡ ಹಾಕುತ್ತಿಲ್ಲ ಎಂದು ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್ ಆರೋಪಿಸಿದ್ದಾರೆ.
ಉಪಖಂಡದಲ್ಲಿ ತ್ವೇಷಮಯ ವಾತಾವರಣ ಇರಲು ಭಾರತದ ಅನಿಯಂತ್ರಿತ ಅಣ್ವಸ್ತ್ರ ಸಂಗ್ರಹಣೆಯೇ ಕಾರಣ ಎಂದಿರುವ ಮುಷರಫ್, ಈ ಕುರಿತು ಭಾರತದ ಮೇಲೆ ವಿಶ್ವ ಸಮುದಾಯ ಒತ್ತಡ ಹಾಕುತ್ತಿಲ್ಲ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನ ಅಣ್ವಸ್ತ್ರ ರಾಷ್ಟ್ರವಾಗಲು ಭಾರತದ ನಿರಂತರ ಬೆದರಿಕೆಯೇ ಕಾರಣವಾಗಿದ್ದು, ಅಶಾಂತಿಗೆ ಪಾಕಿಸ್ತಾನದತ್ತ ಬೊಟ್ಟು ಮಾಡುವ ಬದಲು ಭಾರತದ ಮೇಲೆ ಒತ್ತಡ ಹಾಕಬೇಕೆಂದು ಅವರು ಒತ್ತಾಯಿಸಿದ್ದಾರೆ.
ಇದೇ ವೇಳೆ ಅಮೆರಿಕವನ್ನು ಬೆನ್ನಿಗೆ ಚೂರಿ ಹಾಕುವ ಮಿತ್ರ ಎಂದು ಬಣ್ಣಿಸಿರುವ ಮುಷರಫ್, ತನಗೆ ಅಗತ್ಯವಿದ್ದ ಸಂದರ್ಭದಲ್ಲಿ ಪಾಕಿಸ್ತಾನವನ್ನು ಬಳಸಿಕೊಂಡ ಅದು, ಇದೀಗ ಭಾರತದತ್ತ ವಿಶೇಷ ಸ್ನೇಹ ತೋರಿಸುತ್ತಿದೆ ಎಂದಿದ್ದಾರೆ. ಪಾಕ್ ಬೆಂಬಲವಿಲ್ಲದೇ ಭಯೋತ್ಪಾದನೆಯನ್ನು ಮಟ್ಟ ಹಾಕಲು ಸಾಧ್ಯವಿಲ್ಲ ಎಂಬುದನ್ನು ಅಮೆರಿಕ ಮನಗಾಣಬೇಕಿದೆ. ಈ ಹಿನ್ನೆಲೆಯಲ್ಲಿ ಭಾರತ ಹೇಳಿದ್ದಕ್ಕೆಲ್ಲ ಕುಣಿಯದೇ ಪಾಕಿಸ್ತಾನವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಅವರು ಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.