ಸಿಎಂ ಎಚ್‌ಡಿಕೆ ಮೇಲಿನ ಸಿಟ್ಟು ತೀರಿಸಲು ಜಿಟಿಡಿ ಮಾಡಿದ್ದೇನು?

Published : Jun 19, 2018, 02:35 PM ISTUpdated : Jun 19, 2018, 02:43 PM IST
ಸಿಎಂ ಎಚ್‌ಡಿಕೆ ಮೇಲಿನ ಸಿಟ್ಟು ತೀರಿಸಲು ಜಿಟಿಡಿ ಮಾಡಿದ್ದೇನು?

ಸಾರಾಂಶ

ರಾಜ್ಯದ ಉನ್ನತ ಶಿಕ್ಷಣ ಸಚಿವರು ಯಾರು? ಎಂಬ ಪ್ರಶ್ನೆಯನ್ನು ಇಲಾಖೆ ಅಧಿಕಾರಿಳು ಮತ್ತು ಜನರು ತಮ್ಮನ್ನು ತಾವೇ ಕೇಳಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಯಾಕೆ ಅಂತೀರಾ .. ಈ ಸುದ್ದಿ ಓದಿ    

ಬೆಂಗಳೂರು [ಜೂನ್ 19]  ಕೊಟ್ಟ ಖಾತೆಯನ್ನು ಒಲ್ಲೆ ಎಂದಿದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಮ್ಮ ಕಚೇರಿಯತ್ತಲೂ ಸುಳಿದಿರಲಿಲ್ಲ. ಇದೀಗ ಇಲಾಖೆಗೆ ಸಂಬಂಧಿಸಿದ ಫೈಲ್ ಗಳನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ.

ಸಚಿವರನ್ನು ಕಾಣಲು ಅಧಿಕಾರಿಗಳು ಹೋದರೆ ‘ ಅಯ್ಯೋ.. ನನ್ನ ಹತ್ರ ಏಕೆ ಬರ್ತಿರಾ..? ಬರಬೇಡ್ರಾಪ್ಪ ನೀವು..!  ಎನ್ನುತ್ತಾ ಸಿಎಂ ಕುಮಾರಸ್ವಾಮಿ ಬಳಿಗೆ ಕಳುಹಿಸಿಕೊಡುತ್ತಾ ಇದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಹೋದರೂ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. 

ನನಗೂ ಉನ್ನತ ಶಿಕ್ಷಣ ಇಲಾಖೆಗೂ ಯಾವುದೇ ಸಂಬಂಧವೇ ಇಲ್ಲ,  ನೀವು ಸಿಎಂ ಹೆಚ್‌ಡಿಕೆ ಅವರ ಹತ್ರನೇ ಹೋಗಿ, ಅವರಿಗೆ ಫೈಲ್ ತೋರಿಸಿ, ಸಿಎಂ ಕುಮಾರಣ್ಣ ಅವರೇ ಫೈಲ್‌ಗಳನ್ನ ಕ್ಲಿಯರ್ ಮಾಡ್ತಾರೆ, ನಾನು ಮಾಡಲ್ಲ ಎಂದು ಜಿಟಿಡಿ ಅಧಿಕಾರಿಗಳಿಗೆ ಹೇಳುತ್ತಿದ್ದಾರೆ. 

ಉನ್ನತ ಶಿಕ್ಷಣ ಇಲಾಖೆ ಸದ್ಯ ಜಿ ಟಿ ದೇವೇಗೌಡ ಅವರ ಬಳಿಯೆ ಇದೆ.  ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ  ಹಲವು ಕಡತಗಳು ಬಾಕಿ ಇದ್ದು ಕ್ಲೀಯರ್ ಮಾಡುವುದು ಯಾರು? ಎಂಬ ಪ್ರಶ್ನೆ ಎದುರಾಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ