ಎಂ.ಬಿ.ಪಾಟೀಲ್ ನಂತರ ಜಾರಕಿಹೋಳಿ ಸರದಿ

Published : Jun 09, 2018, 04:33 PM ISTUpdated : Jun 09, 2018, 04:36 PM IST
ಎಂ.ಬಿ.ಪಾಟೀಲ್ ನಂತರ ಜಾರಕಿಹೋಳಿ ಸರದಿ

ಸಾರಾಂಶ

ಸಚಿವಸ್ಥಾನ ಬೇಡ ಎಂದ ಸತೀಶ್ ಜಾರಕಿಹೋಳಿ ಎಂ.ಬಿ.ಪಾಟೀಲ್ ಸಾಲಿಗೆ ಸತೀಶ್ ಜಾರಕಿಹೋಳಿ ಸೇರ್ಪಡೆ ಮತ್ತೊಂದು ಸಭೆಯ ನಂತರ ಮುಂದಿನ ತೀರ್ಮಾನ  

ಬೆಳಗಾವಿ[ಜೂ.09]: ಎರಡನೇ ಹಂತದಲ್ಲಿ ನನಗೆ ಸಚಿವ ಸ್ಥಾನ ಬೇಡ ಎನ್ನುತ್ತಿದ್ದ ಎಂ.ಬಿ.ಪಾಟೀಲ್ ಸಾಲಿಗೆ ಈಗ ಶಾಸಕ ಜಾರಕಿಹೋಳಿ ಕೂಡ ಸೇರ್ಪಡೆಯಾಗಿದ್ದಾರೆ.

ಬೆಳಗಾವಿಯ ಹನುಮಾನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನನಗೆ ಸಚಿವ ಸ್ಥಾನ ಕೊಟ್ಟರೂ ಬೇಡ. ನಾನು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿದ್ದೇನೆ ಎಂಬ ಆರೋಪವಿದೆ. ರಮೇಶ ಜಾರಕಿಹೋಳಿ ಅವರು ಸೋತ ಅಭ್ಯರ್ಥಿಗಳ ಹೇಳಿಕೆ ಪಡೆದು ನನ್ನ ಮೇಲೆ ಆರೋಪ ಮಾಡಿದ್ದಾರೆ. ಇದನ್ನು ಹೈಕಮಾಂಡ್'ಗೆ ಕಳುಹಿಸರಬಹುದು. ಈ ಕಾರಣದಿಂದ ನನಗೆ‌ ಸಚಿವ ಸ್ಥಾನ ಕೈತಪ್ಪಿರುವ ಸಾಧ್ಯತೆಯಿದೆ ಎಂದು ಸಂಶಯ ವ್ಯಕ್ತಪಡಿಸಿದರು.

ಇಷ್ಟೆಲ್ಲಾ ಘಟನಾವಳಿಗಳು ನಡೆದರೂ ಮಾಜಿ ಸಿಎಂ ಸಿದ್ದರಾಮಯ್ಯ ನನ್ನನ್ನು ಸಂಪರ್ಕ ಮಾಡಿಲ್ಲ. ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ. ಎಂ ಬಿ ಪಾಟೀಲರು ದೆಹಲಿಯಿಂದ ಆಗಮಿಸಿದ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾವುದು ಎಂದು ತಿಳಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡಮಾನ್‌ ದ್ವೀಪದಲ್ಲಿ ಸಾವರ್ಕರ್ ಪ್ರತಿಮೆ ಅನಾವರಣ
ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!