ಕಾಲಿಗೆ ಬಿದ್ದು ಗೋಗರೆದ ತಾಯಿ: ಕಿವಿ ಕೇಳದಂತೆ, ದರ್ಪದಿಂದ ಕುಳಿತ ಪೊಲೀಸ್ ಅಧಿಕಾರಿ!

Published : Jan 20, 2019, 03:36 PM ISTUpdated : Jan 21, 2019, 01:51 PM IST
ಕಾಲಿಗೆ ಬಿದ್ದು ಗೋಗರೆದ ತಾಯಿ: ಕಿವಿ ಕೇಳದಂತೆ, ದರ್ಪದಿಂದ ಕುಳಿತ ಪೊಲೀಸ್ ಅಧಿಕಾರಿ!

ಸಾರಾಂಶ

ತಾಯಿಯೊಬ್ಬರು ತನ್ನ ಮಗನ ಸಾವಿಗೆ ನ್ಯಾಯ ದೊರಕಿಸಿ, ದಯವಿಟ್ಟು ಕಂಪ್ಲೇಟ್ ದಾಖಲಿಸಿ ಎಂದು ಪೊಲೀಸ್ ಅಧಿಕಾರಿಯ ಕಾಲಿಗೆ ಬಿದ್ದು ಗೋಗರೆದಿದ್ದಾರೆ. ಆದರೆ ಅಧಿಕಾರಿ ಮಾತ್ರ ಕಿವಿ ಕೇಳದಂತೆ ದರ್ಪದಿಂದ ನಡೆದುಕೊಂಡಿದ್ದು, ಸದ್ಯ ಕೆಲಸವನ್ನೇ ಕಳೆದುಕೊಂಡಿದ್ದಾನೆ.

ಲಕ್ನೋ[ಜ.20]: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ತನ್ನ ಮಗನ ಸಾವಿಗೆ ಸಂಬಂಧಿಸಿದಂತೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದ ತಾಯಿಯೊಬ್ಬರು, ಕಂಪ್ಲೇಂಟ್ ಸ್ವೀಕರಿಸಲು ಪೊಲೀಸ್ ಇನ್ಸ್ ಪೆಕ್ಟರ್ ಕಾಲಿಗೆ ಬಿದ್ದು ಗೋಗರೆದಿದ್ದಾರೆ. ಈ ಘಟನೆ ಉತ್ತರ ಪ್ರದೇಶ ಪೊಲೀಸ್ ಇಲಾಖೆಯನ್ನು ತಲೆ ತಗ್ಗಿಸುವಂತೆ ಮಾಡಿದೆ.

ತನ್ನ 19 ವರ್ಷದ ಮಗ ಸಾವನ್ನಪ್ಪಿದ್ದಾನೆಂದು ಕಂಪ್ಲೇಂಟ್ ನೀಡಲು ಬಂದ ತಾಯಿಯ ದೂರು ಸ್ವೀಕರಿಸಲು ಪೊಲೀಸ್ ಅಧಿಕಾರಿ ಒಪ್ಪದಿದ್ದಾಗ, ಆ ತಾಯಿ ಇನ್ಸ್ ಪೆಕ್ಟರ್ ಎದುರು ಕೈ ಜೋಡಿಸಿ ಕೇಳಿಕೊಂಡಿದ್ದಾಳೆ. ಹೀಗಿದ್ದರೂ ಠಾಣಾಧಿಕಾರಿ ಒಪ್ಪದಿದ್ದಾಗ, ಬೇರೆ ವಿಧಿ ಇಲ್ಲದ ತಾಯಿ ಕಣ್ಣೀರು ಹಾಕುತ್ತಾ ಪೊಲೀಸ್ ಅಧಿಕಾರಿಯ ಕಾಲಿಗೆ ಬಿದ್ದು ಗೋಗರೆದಿದ್ದಾಳೆ. ಈ ವೇಳೆ ರಾಜನಂತೆ ಕಾಲಿನ ಮೇಲೆ ಕಾಲು ಹಾಕಿ ತನ್ನ ಎದುರು ನಾಟಕ ನಡೆಯುತ್ತಿದೆ ಎಂಬಂತೆ ಕುಳಿತಿದ್ದ. ಆದರೆ ಅಲ್ಲಿ ಸೇರಿದ್ದ ಕೆಲ ಯುವಕರು ಠಾಣಾಧಿಕಾರಿಯ ಈ ಹಂಕಾರಭರಿತ ವರ್ತನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ, ವಿಡಿಯೋ ವೈರಲ್ ಮಾಡಿದ್ದಾರೆ. ಇದರಿಂದ ಭಯಗೊಂಡ ಪೊಲೀಸ್ ಅಧಿಕಾರಿ ದೂರು ಸ್ವೀಕರಿಸಿ ತನಿಖೆಗೆ ಆದೇಶಿಸಿದ್ದಾರೆ. ಸದ್ಯ ದರ್ಪ ಮೆರೆದ ಪೊಲಿಸ್ ಅಧಿಕಾರಿಯನ್ನು ಹಿರಿಯ ಅಧಿಕಾರಿಗಳು ಅಮಾನತ್ತುಗೊಳಿಸಿದ್ದಾರೆ.

ವಾಸ್ತವವಾಗಿ ಲಕ್ನೋದ ಗೋಂಡ್ವಾ ಇಲಾಖೆಯಲ್ಲಿರುವ ಒಂದು ಫ್ಲೈವುಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಟಿಂಕೂ ಮೈ ಮೇಲೆ ಮಷೀನ್ ಬಿದ್ದು ಸಾವನ್ನಪ್ಪಿದ್ದ ಟಿಂಕೂನ ಸಹೋದರ ಕೂಡಾ ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಫ್ಯಾಕ್ಟರಿಯ ಮಾಲಿಕ ಫ್ಯಾಕ್ಟರಿಗೆ ಸಂಬಂಧಿಸಿದಂತೆ ಯಾವುದೇ ಪರವಾನಿಗೆ ಪತ್ರ ಹೊಂದಿಲ್ಲ, ಅಕ್ರಮವಾಗಿ ನಡೆಸುತ್ತಿದ್ದರೆನ್ನಲಾಗಿದೆ.ಹೀಗಾಗಿ ಟಿಂಕೂನ ತಾಯಿ ಫ್ಯಾಕ್ಟರಿ ಮಾಲಿಕ ವಿರುದ್ಧ ಕ್ರಮ ಕೈಗೊಂಡು ತನ್ನ ಮಗನಿಗೆ ನ್ಯಾಯ ದೊರಕಿಸುವಂತೆ ಕೇಳಿ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರೆನ್ನಲಾಗಿದೆ. 

ಆದರೆ ತಾಯಿಯ ಗೋಗರೆತ ಹಾಗೂ ಪೊಲೀಸ್ ಅಧಿಕಾರಿ ದರ್ಪ ಕಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ದೂರನ್ನು ಸ್ವೀಕರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಸ್ ಪಿ ಹರೇಂದ್ರ ಸಿಂಗ್ 'ನಾನೂ ಈ ಘಟನೆಯ ವಿಡಿಯೋ ವೀಕ್ಷಿಸಿದ್ದೇನೆ. ಈ ಕುರಿತಾಗಿ ಹೆಚ್ಚಿನ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಸದ್ಯ ದರ್ಪ ಮೆರೆದ ಪೊಲೀಸ್ ಅಧಿಕಾರಿಯನ್ನು ಅಮಾನತ್ತುಗೊಳಿಸಲಾಗಿದೆ' ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?