
ಪಣಜಿ(ಜ.30): ತೀವ್ರ ಅನಾರೋಗ್ಯಪೀಡಿತರಾಗಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್, ಇಂದು ವಿಧಾನಸಭೆಯಲ್ಲಿ ಗೋವಾ ರಾಜ್ಯದ ಬಜೆಟ್ ಮಂಡಿಸಿ ಗಮನಸೆಳೆದರು.
ಅಸ್ವಸ್ಥ ಪರಿಸ್ಥಿತಿಯಲ್ಲೇ ವಿಧಾನಸಭೆಗೆ ಆಗಮಿಸಿದ ಪರಿಕ್ಕರ್, ತಲೆಗೆ ಟೋಪಿ, ಮೂಗಿಗೆ ಪೈಪ್ ಹಾಕಿಕೊಂಡು ಬಜೆಟ್ ಮಂಡಿಸಿದರು. ಈ ವೇಳೆ ಪರಿಕ್ಕರ್ ಮಾತಿನ ಮಧ್ಯೆ ಹಲವು ಬಾರಿ ನೀರು ಕೇಳಿದ್ದು, ಸಿಬ್ಬಂದಿ ಅವರಿಗೆ ನೀರು ಕೊಡುತ್ತಾ ಸಹಕರಿಸಿದರು.
ಪರಿಕ್ಕರ್ ಅತ್ಯಂತ ಮೆಲು ಧ್ವನಿಯಲ್ಲಿ ಬಜೆಟ್ ಮಂಡಿಸಿದ್ದು, ವಿಧಾನಸಭೆ ಅತ್ಯಂತ ಗಂಭೀರವಾಗಿ ಪರಿಕ್ಕರ್ ಭಾಷಣವನ್ನು ಆಲಿಸಿತು. ಅನಾರೋಗ್ಯ ಪರಿಸ್ಥಿತಿಯಲ್ಲೂ ಬಜೆಟ್ ಮಂಡನೆ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಿದ ಪರಿಕ್ಕರ್ ಅವರಿಗೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.