
ನವದೆಹಲಿ[ಜೂ.26]: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನಗಳ ಸಂಖ್ಯೆ ವೃದ್ಧಿಸುತ್ತಿರುವುದರಿಂದ ವಾಯು ಮಾಲಿನ್ಯವೂ ಹೆಚ್ಚುತ್ತಿದೆ. ಹೀಗಾಗಿ ಜನರ ಜೀವ ಅಪಾಯದಲ್ಲಿದೆ. ವಾಹನಗಳು ಹೊರ ಸೂಸುವ ಹೊಗೆ ಜನರ ಕಣ್ಣು, ಸ್ವಾಶಕೋಶಗಳಿಗೆ ಸೇರುವುದರಿಂದ ಅನೇಕ ರೋಗಗಳನ್ನು ಎದುರಿಸುತ್ತಿದ್ದಾರೆ. ಆದರೆ ಇವೆಲ್ಲದರ ನಡುವೆ ಸಂಸದರೊಬ್ಬರು ತಮ್ಮ ಪರಿಸರ ಪ್ರೇಮಿ ದಿನಚರಿಗೆ ಫೇಮಸ್ ಆಗುತ್ತಿದ್ದಾರೆ. ತಾನೊಬ್ಬ ರಾಜಕಾರಣಿ ಕಾರು ಬೇಕು ಎಂಬ ಶೋಕಿ ಬಿಟ್ಟು, ಸೈಕಲ್ ನಲ್ಲೇ ಸಂಸತ್ತಿಗೆ ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೌದು ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಮನ್ಸುಖ್ ಮಾಂಡವೀಯ ಸೈಕಲ್ ತುಳಿದುಕೊಂಡೇ ಸಂಸತ್ತು ಆವರಣಕ್ಕೆ ಬರುತ್ತಾರೆ. ಇವರ ಈ ಸರಳ ನಡೆ ಜನರಿಗೂ ಬಹಳ ಇಷ್ಟವಾಗಿದೆ. ಹೀಗಾಗೇ ಸೈಕಲ್ ನಲ್ಲಿ ತೆರಳುವ ಸಂಸದನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
ಸಂಸದರ ಈ ಪರಿಸರ ಸ್ನೇಹಿ ನಡೆ ಜನರಿಗೆ ಇಷ್ಟವಾಗುತ್ತಿದ್ದರೂ, ಅದೆಷ್ಟು ಮಂದಿ ಅನುಕರಿಸುತ್ತರೆಂದು ತಿಳಿದಿಲ್ಲ. ಆದರೆ ಅವರ ಈ ನಡೆಯಿಂದ ಪರಿಸರದ ಮೇಲೆ ಕೊಂಚವಾದರೂ ಪರಿಣಾಮ ಬೀಳಲಿದೆ. ಇನ್ನು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಪ್ರಮಾಣವಚನ ಕಾರ್ಯಕ್ರಮಕ್ಕೆ ಮನ್ಸುಖ್ ಸೈಕಲ್ನಲ್ಲೇ ಬಂದಿದ್ದರು ಎಂಬುವುದು ಗಮನಾರ್ಹ.
ಪರಿಸರ ಪ್ರೇಮ ತೋರಿಸಲು ಯಾವುದೋ ಸಂಘ ಸಂಸ್ಥೆಗೆ ಸೇರಿ, ಹೋರಾಟಗಳನ್ನು ಮಾಡಲೇಬೇಕೆಂದಿಲ್ಲ. ಬದಲಾಗಿ ನಾವೇ ಕೊಂಚ ಹೊಂದಾಣಿಕೆ ಮಾಡಿಕೊಳ್ಳಬೇಕು. ವಾಹನಗಳ ಬಳಕೆ ಕಡಿಮೆ ಮಾಡಿ ಸೈಕಲ್ ಬಳಸಿದರೆ ಇದು ಪರಿಸರ ಉಳಿಸಲು ನಾವು ಕೊಡುವ ಬಹುದೊಡ್ಡ ಕೊಡುಗೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.