
ನವದೆಹಲಿ: 2047 ರಲ್ಲಿ ಭಾರತ ಮತ್ತೊಮ್ಮೆ ವಿಭಜನೆಯಾಗಬಹುದು ಎಂದು ಬಿಜೆಪಿ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೊಸ ವಿವಾದ ಸೃಷ್ಟಿಸಿದ್ದಾರೆ. ‘ಧರ್ಮದ ಆಧಾರದಲ್ಲಿ 1947 ರಲ್ಲಿ ಭಾರತ ವಿಭಜನೆಯಾಗಿತ್ತು.
ಅದೇ ಪರಿಸ್ಥಿತಿ 2047 ರಲ್ಲಿ ಸಂಭವಿಸಲಿದೆ. 72 ವರ್ಷಗಳಲ್ಲಿ 33 ಕೋಟಿಯಷ್ಟಿದ್ದ ಜನಸಂಖ್ಯೆ, 135.7 ಕೋಟಿಗೆ ಏರಿಕೆಯಾಗಿದೆ. ವಿಭಜಕ ಶಕ್ತಿಗಳ ಜನಸಂಖ್ಯಾ ಸ್ಫೋಟ ಭಯಾನಕವಾಗಿದೆ.
ಪ್ರಸ್ತುತ ಪರಿಚ್ಛೇದ 35ಎ ಕುರಿತಂತೆ ಕೂಗು ಕೇಳಿಬರುತ್ತಿದೆ. ಭಾರತದ ಬಗ್ಗೆ ಉಲ್ಲೇಖಿಸುವುದು ಅಸಾಧ್ಯವಾಗುವಂತಹ ಸಮಯ ಬರಬಹುದು’ ಎಂದು ಸಚಿವ ಸಿಂಗ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.