ಕೇಂದ್ರ ಸಚಿವ ಅನಂತ್ ಕುಮಾರ್ ಕ್ಷೇಮ: ಅಧಿಕಾರಿಗಳ ಸ್ಪಷ್ಟನೆ

By Web DeskFirst Published Oct 20, 2018, 10:39 PM IST
Highlights

 ಕೇಂದ್ರ ಸಚಿವ ಅನಂತ್ ಕುಮಾರ್ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಗೆ ಅವರ ಕಚೇರಿ ಸ್ಪಷ್ಟನೆ ನೀಡಿದೆ.

ಬೆಂಗಳೂರು, [ಅ.20]: ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರ ಖಾತೆ  ಸಚಿವ ಅನಂತಕುಮಾರ್​ ಅವರು ನಿಧನರಾಗಿದ್ದಾರೆ ಎಂಬ ಗುಮಾನಿಗೆ ಅವರ ಕಚೇರಿಯಿಂದ ಸ್ಪಷ್ಟನೆ ಸಿಕ್ಕಿದೆ.

ಅನಂತಕುಮಾರ್​ ಅವರು ಆರೋಗ್ಯವಾಗಿದ್ದಾರೆ. ಅನಂತಕುಮಾರ್​​ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಂಡು ಬೆಂಗಳೂರಿಗೆ ಬಂದಿದ್ದು, ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ.ಹಬ್ಬಿರುವ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಸ್ಪಷ್ಟಪಡಿಸಿದೆ.

15 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಅನಂತಕುಮಾರ್​ ಅವರ ಕಚೇರಿಯಿಂದ ತಿಳಿದುಬಂದಿದೆ. 

click me!