
ಪ್ರಯಾಣಿಕರೊಬ್ಬರ ಬ್ಯಾಗ್ನಿಂದ 2 ಮಾವಿನ ಹಣ್ಣು ಕದ್ದ ಎಂಬ ಕಾರಣಕ್ಕಾಗಿ ಭಾರತದ ಕಾರ್ಮಿಕನೊಬ್ಬನನ್ನು ಯುಎಇ ಕೋರ್ಟ್ ಗಡೀಪಾರು ಮಾಡಿದೆ. ದುಬೈ ವಿಮಾನನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಭಾರತೀಯನ ಮೇಲೆ ಕಳೆದ ವರ್ಷ ಪ್ರಯಾಣಿಕರೊಬ್ಬರ ಬ್ಯಾಗ್ನಿಂದ ಮಾವಿನಹಣ್ಣು ಕದ್ದ ಆರೋಪವಿತ್ತು.
ಸೋಮವಾರ ತೀರ್ಪು ನೀಡಿದ ಕೋರ್ಟ್, 5000 ದಿರ್ಹಾಮ್(96,474 ರು.) ದಂಡ ವಿಧಿಸಿ ಗಡೀಪಾರು ಮಾಡಿದೆ. ವಿಶೇಷವೆಂದರೆ ಕದ್ದ ಮಾವಿನ ಹಣ್ಣುಗಳ ಬೆಲೆ ಕೇವಲ 115 ರು. ಮಾತ್ರ. ಮಾವಿನಹಣ್ಣುಗಳನ್ನು ಭಾರತಕ್ಕೆ ಸಾಗಿಸಲಾಗುತ್ತಿತ್ತು. ಬಾಯಾರಿಕೆ ಆಗಿದ್ದಕ್ಕೆ 2 ಮಾವಿನಹಣ್ಣು ಬಾಕ್ಸ್ನಿಂದ ತೆಗೆದುಕೊಂಡಿದ್ದಾಗಿ ವಿಚಾರಣೆ ವೇಳೆ ಆ ವ್ಯಕ್ತಿ ಒಪ್ಪಿಕೊಂಡಿದ್ದಾನೆ. ಹಣ್ಣು ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.