ಮನೆಯಲ್ಲಿದ್ದ ಅನಾಥ ಹುಡುಗ ನೆರೆಮನೆಯಾಕೆಯೊಂದಿಗೆ ಓಡಿಹೋದಾಗ...

Published : Jan 18, 2017, 01:47 PM ISTUpdated : Apr 11, 2018, 12:45 PM IST
ಮನೆಯಲ್ಲಿದ್ದ ಅನಾಥ ಹುಡುಗ ನೆರೆಮನೆಯಾಕೆಯೊಂದಿಗೆ ಓಡಿಹೋದಾಗ...

ಸಾರಾಂಶ

ರೋಷನಿ ಕಡೆಯವರು ಐಶಾ ಐಶಾಳ ಗುಪ್ತಾಂಗಕ್ಕೆ ಖಾರದಪುಡಿ ಎರಚಿ ಅಮಾನವೀಯವಾಗಿ ವರ್ತಿಸುತ್ತಾರೆ. ತಮ್ಮದೇನೂ ತಪ್ಪಿಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡರೂ ಇಡೀ ರಾತ್ರಿ ಮನೆಯೊಂದರಲ್ಲಿ ಕೂಡಿಹಾಕಿ ಐಶಾ ಮೇಲೆ ದೌರ್ಜನ್ಯ ಎಸಗುತ್ತಾರೆ.

ಬೆಂಗಳೂರು(ಜ. 18): ಕನಿಕರದಿಂದ ಅನಾಥ ಹುಡುಗನಿಗೆ ಮನೆಯಲ್ಲಿ ಆಶ್ರಯ ಕೊಟ್ಟಿದ್ದಕ್ಕೆ ಇಬ್ಬರು ಮಹಿಳೆಯರು ಹಿಗ್ಗಾಮುಗ್ಗ ಥಳಿಸಿಕೊಳ್ಳಬೇಕಾದ ಸ್ಥಿತಿ ಎದುರಾಯಿತು. ಪಕ್ಕದ ಮನೆಯ ಹುಡುಗಿ ಜೊತೆ ಆ ಹುಡುಗ ಓಡಿಹೋದ ಬಳಿಕ ಹುಡುಗಿಯರ ಮನೆಯವರ ಆಕ್ರೋಶ ವ್ಯಕ್ತವಾಗಿದ್ದು ಈ ಇಬ್ಬರು ಮಹಿಳೆಯರ ಮೇಲೆ. ನಂದಿನಿ ಲೇಔಟ್'ನಲ್ಲಿ ಘಟನೆ ವರದಿಯಾಗಿದ್ದು, ಅಯೇಶಾ ಮತ್ತಾಕೆಯ ತಾಯಿ ರಜಿಯಾ ಮೇಲೆ ಯುವತಿಯ ಪೋಷಕರು ಹಾಗೂ ಮಹಿಳಾ ಸಂಘದ ಕಾರ್ಯಕರ್ತರು ಹಲ್ಲೆ ಎಸಗಿದ್ದಾರೆ. ಆದರೆ, ಯುವಕ ಶಬುಲ್ ಓಡಿಹೋಗಿದ್ದಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಐಶಾ ಕುಟುಂದವರು ಹೊಡೆತ ತಿನ್ನಬೇಕಾಯಿತು.

ಏನಿದು ಘಟನೆ?
ಅಯೇಶಾಳ ತಾಯಿ ರಜಿಯಾಗೆ ಶಬುಲ್ ಎಂಬ ಯುವಕ ಪರಿಚಿಯವಾಗುತ್ತಾನೆ. ದಿಕ್ಕು ದೆಶೆ ಇಲ್ಲದ ಈತನಿಗೆ ರಜಿಯಾ ತನ್ನ ಮನೆಯಲ್ಲೇ ಊಟ ತಿಂಡಿ ಮಾಡಿಕೊಡುತ್ತಿರುತ್ತಾಳೆ. 3 ತಿಂಗಳಿನಿಂದ ಆತ ರಜಿಯಾ ಮನೆಯಲ್ಲಿ ಆಶ್ರಯ ಪಡೆದಿರುತ್ತಾನೆ. ಕೆಲ ದಿನಗಳ ಹಿಂದೆ ಪಕ್ಕದ ಬೀದಿಯ ಹರ್ಷಿಯಾ ಎಂಬ ಹುಡುಗಿ ಜೊತೆ ಶಬುಲ್'ಗೆ ಪ್ರೇಮಾಂಕುರವಾಗುತ್ತದೆ. ಜನವರಿ 14ರಂದು ಹರ್ಷಿಯಾ ಜೊತೆ ಶಬುಲ್ ಪರಾರಿಯಾಗಿಬಿಡುತ್ತಾನೆ. ಇದು ಅಯೇಶಾ ಮತ್ತು ರಜಿಯಾಗೂ ಶಾಕ್ ನೀಡಿರುತ್ತದೆ.

ಆದರೆ, ಹರ್ಷಿಯಾ ತಾಯಿ ರೋಷನಿ ಅವರು ಮಹಿಳಾ ಸಂಘದ ಕಾರ್ಯಕರ್ತರ ಜೊತೆ ಸೇರಿಕೊಂಡು ಅಯೇಶಾ ಮತ್ತು ರಜಿಯಾಳ ಮೇಲೆ ಹಲ್ಲೆ ಮಾಡುತ್ತಾರೆ. ಓಡಿಹೋದ ಹುಡುಗನ ಮಾಹಿತಿ ಕೊಡಬೇಕು ಎಂದು ಒತ್ತಾಯಿಸಿ ಹಿಗ್ಗಾಮುಗ್ಗ ಥಳಿಸುತ್ತಾರೆ.

ಗುಪ್ತಾಂಗಕ್ಕೆ ಖಾರದ ಪುಡಿ: ರೋಷನಿ ಕಡೆಯವರು ಐಶಾ ಐಶಾಳ ಗುಪ್ತಾಂಗಕ್ಕೆ ಖಾರದಪುಡಿ ಎರಚಿ ಅಮಾನವೀಯವಾಗಿ ವರ್ತಿಸುತ್ತಾರೆ. ತಮ್ಮದೇನೂ ತಪ್ಪಿಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡರೂ ಇಡೀ ರಾತ್ರಿ ಮನೆಯೊಂದರಲ್ಲಿ ಕೂಡಿಹಾಕಿ ಐಶಾ ಮೇಲೆ ದೌರ್ಜನ್ಯ ಎಸಗುತ್ತಾರೆ. ಅಯೇಶಾ ತಾಯಿ ರಜಿಯಾಳನ್ನು ಬೆತ್ತಲೆಯಾಗಿಸಿ ನಿಲ್ಲಿಸಿ ಹಿಗ್ಗಾಮುಗ್ಗಾ ಭಾರಿಸುತ್ತಾರೆ.

ಘಟನೆ ಬಳಿಕ ಅಯೇಶಾ ಮತ್ತು ರಜಿಯಾ ಇಬ್ಬರೂ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿ ಪ್ರಕಟಿಸಿದ ಬ್ಲೂಮ್‌ಬರ್ಗ್, ಭಾರತದ ಏಕೈಕ ಫ್ಯಾಮಿಲಿಗೆ ಸ್ಥಾನ
ಕಾರ್ಯಕರ್ತರು ಎದೆಗುಂದಬೇಡಿ, ಜೆಡಿಎಸ್‌ಗೆ ಉತ್ತಮ ಕಾಲ ಬರಲಿದೆ: ಕೇಂದ್ರ ಸಚಿವ ಕುಮಾರಸ್ವಾಮಿ