ಸಂವಿಧಾನ 8ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆಗಾಗಿ ಲಕ್ಷ ಟ್ವೀಟ್ ಟ್ರೆಂಡ್

Published : Nov 02, 2017, 03:21 PM ISTUpdated : Apr 11, 2018, 01:00 PM IST
ಸಂವಿಧಾನ 8ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆಗಾಗಿ ಲಕ್ಷ ಟ್ವೀಟ್ ಟ್ರೆಂಡ್

ಸಾರಾಂಶ

ಇದೇ ವೇಳೆ ಕರಾವಳಿ ಜಿಲ್ಲೆಯನ್ನು ಪ್ರತ್ಯೇಕ ತುಳುರಾಜ್ಯವಾಗಿ ಪರಿಗಣಿಸುವಂತೆ ಗಮನ ಸೆಳೆಯಲು ಕಪ್ಪು ದಿನವನ್ನಾಗಿ ಘೋಷಿಸಿ ಇನ್ನೊಂದು 1 ಲಕ್ಷ ಟ್ವೀಟ್ ಗುರಿಯನ್ನು ಅಭಿಯಾನವನ್ನು ಜೋಡಿಸಲಾಯಿತು. ಒಂದೇ ದಿನ 2 ಲಕ್ಷ ಟ್ವೀಟ್‌'ಗಳು ಟ್ರೆಂಡ್ ಆಯಿತು.

ಮಂಗಳೂರು(ನ.02): ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಮಂಗಳೂರಿನ ಜೈ ತುಳುನಾಡು ಸಂಘಟನೆಯ ವತಿಯಿಂದ ಬುಧವಾರ 1 ಲಕ್ಷ ಟ್ವೀಟ್ ಅಭಿಯಾನವನ್ನು ನಡೆಸಲಾಯಿತು.

ಇದೇ ವೇಳೆ ಕರಾವಳಿ ಜಿಲ್ಲೆಯನ್ನು ಪ್ರತ್ಯೇಕ ತುಳುರಾಜ್ಯವಾಗಿ ಪರಿಗಣಿಸುವಂತೆ ಗಮನ ಸೆಳೆಯಲು ಕಪ್ಪು ದಿನವನ್ನಾಗಿ ಘೋಷಿಸಿ ಇನ್ನೊಂದು 1 ಲಕ್ಷ ಟ್ವೀಟ್ ಗುರಿಯನ್ನು ಅಭಿಯಾನವನ್ನು ಜೋಡಿಸಲಾಯಿತು. ಒಂದೇ ದಿನ 2 ಲಕ್ಷ ಟ್ವೀಟ್‌'ಗಳು ಟ್ರೆಂಡ್ ಆಯಿತು.

ಕನ್ನಡದಲ್ಲಿ ತುಳು ಭಾಷೆಯನ್ನು ಟೈಪ್ ಮಾಡಿದ ಟ್ವೀಟ್ಟಿಗರು, ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನವನ್ನು ನೀಡುವಂತೆ ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ದಿನವಿಡಿ ಟ್ವೀಟ್ ಮಾಡಿದರು. ಬೆಳಗ್ಗೆ 6 ಗಂಟೆಗೆ ಆರಂಭವಾದ ಟ್ವೀಟ್ ಮಧ್ಯರಾತ್ರಿ 12 ಗಂಟೆವರೆಗೆ ಮುಂದುವರಿದಿದೆ ಎಂದು ಜೈ ತುಳುನಾಡು ಸಂಘಟನೆಯ ಅಧ್ಯಕ್ಷ ಅಶ್ವತ್ಥ್ ತಿಳಿಸಿದ್ದಾರೆ.

ಮೊದಲ ಬಾರಿಗೆ ಲಕ್ಷ ಟ್ವೀಟ್: ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ ಹಾಗೂ ಕಪ್ಪು ದಿನವನ್ನಾಗಿ ಕರೆಸಿಕೊಂಡ ಟ್ವೀಟಿಗರು, 1 ಲಕ್ಷ ಟ್ವೀಟ್ ಅಭಿಯಾನ ಇದೇ ಮೊದಲ ಬಾರಿಗೆ ನಡೆಸಲಾಗಿದೆ. ಈ ಹಿಂದೆ ಟ್ವೀಟ್ ಅಭಿಯಾನ ನಡೆಸಿದರೂ ಪರಿಣಾಮಕಾರಿಯಾಗಿರಲಿಲ್ಲ. ಹ್ಯಾಷ್‌'ಟ್ಯಾಗ್ ಸಮರ್ಪಕವಾಗಿ ಇರಲಿಲ್ಲ. ಈ ಬಾರಿ ಹ್ಯಾಷ್‌'ಟ್ಯಾಗ್‌'ನ್ನು ಒಂದೇ ವಾಕ್ಯದಲ್ಲಿ ನೀಡಲಾಗಿದೆ. ‘ಬ್ಲಾಕ್ ಡೇ ಫಾರ್ ತುಳುನಾಡ್’ ಎಂದು ಹ್ಯಾಷ್‌'ಟ್ಯಾಗ್ ನೀಡಲಾಗಿದ್ದು, ಸಂಜೆ 3 ಗಂಟೆಗೆ 80 ಸಾವಿರ ಟ್ವೀಟ್ ಮಾಡಲಾಗಿದೆ. ಇದರೊಂದಿಗೆ ನಿಗದಿತ 1 ಲಕ್ಷ ಗುರಿಯನ್ನು ಮಧ್ಯರಾತ್ರಿಯೊಳಗೆ ತಲುಪುತ್ತೇವೆ. ಇದೇ ರೀತಿ ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ವಿಚಾರದ ಟ್ವೀಟ್ ಕೂಡ ರಾತ್ರಿ ವೇಳೆಗೆ 1 ಲಕ್ಷ ಗುರಿ ತಲುಪಲಿದೆ ಎನ್ನುತ್ತಾರೆ ಸಂಘಟಕರು. ಈ ಟ್ವೀಟ್‌'ನ್ನು ಪ್ರಧಾನಿ, ಗೃಹ ಸಚಿವರು ಹಾಗೂ ಸಂಸದರಿಗೆ, ಮುಖ್ಯಮಂತ್ರಿಗೆ ಕಳುಹಿಸಲಾಗಿದೆ.

ಅ.29ರಂದು ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ ಭೇಟಿ ವೇಳೆ ಟ್ವಿಟರ್, ಫೇಸ್‌'ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಲಾಗಿತ್ತು. ಬಳಿಕ ನ.1ರಂದು ರಾಜ್ಯೋತ್ಸವದಂದು ಸಾಮೂಹಿಕ ಟ್ವೀಟ್ ಅಭಿಯಾನ ನಡೆಸುವಂತೆ ತೀರ್ಮಾನಿಸಲಾಗಿತ್ತು ಎಂದು ತುಳುನಾಡು ಸಂಘಟನೆ ಮುಖಂಡ ಕಿರಣ್ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನ.29ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದಾಗಲೂ ಸ್ವಯಂ ಆಗಿ ಟ್ವೀಟ್ ಅಭಿಯಾನ ನಡೆಸಲಾಗಿತ್ತು. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಹಕ್ಕೊತ್ತಾಯ ಸಲ್ಲಿಸಲು ಟ್ವೀಟ್ ಮಾಡಲಾಗಿತ್ತು. ಈ ಟ್ವೀಟ್ ಬಗ್ಗೆ ಟ್ವಿಟರ್, ಫೇಸ್‌'ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?