ನಡೆದಾಡುವ ದೇವರೆಂದೇ ಗೌರವಕ್ಕೆ ಪಾತ್ರರಾಗಿದ್ದ ಶತಾಯುಷಿ, ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ನಮ್ಮನ್ನೆಲ್ಲ ಅಗಲಿದ್ದಾರೆ. ರಾಜ್ಯ ಸರ್ಕಾರ ಮೂರು ದಿನ ಶೋಕಾಚರಣೆ ಘೋಷಿಸಿದೆ.
ಬೆಂಗಳೂರು[ಜ.21] ರಾಜ್ಯದಲ್ಲಿ 3 ದಿನ ಶೋಕಾಚರಣೆಗೆ ಮಾಡಲಾಗುತ್ತಿದೆ. ಮಂಗಳವಾರ ಅಂದರೆ ಜನವರಿ 22 ರಂದು ಬ್ಯಾಂಕ್ಗಳಿಗೂ ರಜಾ ಇರಲಿದೆ.
ಸರಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಿದ್ದು, ತುಮಕೂರಿನಲ್ಲಿ ಸೋಮವಾರ ಅಪರಾಹ್ನವೇ ರಜೆ ಘೋಷಿಸಲಾಗಿತ್ತು. ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಿಗೆ ರೆಜೆ ಘೊಷಿಸಲಾಗಿದೆ.
ತುಮಕೂರು: ಮಾರ್ಗ ಬದಲಾವಣೆ; ಯಾರು ಹೇಗೆ ಹೋಗ್ಬೇಕು? ಫುಲ್ ಡೀಟೆಲ್ಸ್...
ಅಪಾರ ಭಕ್ತಗಣವನ್ನು ಬಿಟ್ಟು ನಡೆದಾಡುವ ದೇವರು ನಡೆದಿದ್ದಾರೆ. ಆದರೆ ಅವರು ಬಿಟ್ಟು ಹೋದ ನಂಬಿಕೆ, ಶ್ರದ್ಧೆ, ವಿಶ್ವಾಸ ಎಂದೆಂದಿಗೂ ಶಾಶ್ವತವಾಗಿರುತ್ತದೆ. ಮಂಗಳವಾರ ಸ್ವಾಮೀಜಿ ಅವರಿಗೆ ಅಂತಿಮ ನಮನ ಸಲ್ಲಿಸಲಾಗುವುದು.
ಸಿದ್ಧಗಂಗಾ ಸ್ವಾಮೀಜಿ ಬಿಟ್ಟು ಹೋದ ಆದರ್ಶದ ದಾರಿ