
ನವದೆಹಲಿ (ಮಾ.30): ಬಹುಚರ್ಚಿತ ತ್ರಿವಳಿ ತಲಾಖ್ ವಿಚಾರಣೆ ನಡೆಸಲು ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠವನ್ನು ಸುಪ್ರೀಂಕೋರ್ಟ್ ಸ್ಥಾಪಿಸಿದೆ. ಮೇ 11 ರಂದು ವಿಚಾರಣೆ ನಡೆಯಲಿದೆ.
ಪತಿಯು 3 ಬಾರಿ ತಲಾಖ್ ಅಂತ ಹೇಳುವುದು ಕಾನೂನಿನ ಪ್ರಕಾರ ವಿಚ್ಚೇದನವಾಗುತ್ತದೆಯೇ ಎಂದು ಪ್ರಶ್ನಿಸಿ ಸುಪ್ರೀಂಕೋರ್ಟ್'ಗೆ ಕೇಂದ್ರ ಸರ್ಕಾರ ಸೇರಿದಂತೆ ಹಲವಾರು ಮಂದಿ ಅರ್ಜಿಗಳು ಸಲ್ಲಿಸಿದ್ದರು. ತ್ರಿವಳಿ ತಲಾಖನ್ನು ನಿಷೇಧಿಸುವಂತೆ ಒತ್ತಾಯಿಸಿ ಸಾಕಷ್ಟು ಅರ್ಜಿಗಳು ಬಂದಿದ್ದು ಸುಪ್ರೀಂಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳ
ತ್ರಿವಳಿ ತಲಾಖ್ ನಿಷೇಧ ಮಾಡುವುದನ್ನು ಅಖಿಲ ಭಾರತ ಮುಸ್ಲೀಂ ವೈಯಕ್ತಕ ಮಂಡಳಿ ಇದನ್ನು ಖಂಡಿಸಿತ್ತು. ತಮ್ಮ ಧರ್ಮದ ನಂಬಿಕೆಗಳನ್ನು ಇದು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದರು. ಪಾಕ್, ಇಂಡೋನೇಷ್ಯಾ ಸೇರಿದಂತೆ ಮುಸ್ಲೀಂ ದೇಶಗಳಲ್ಲೂ ಸಹ ಇದನ್ನು ನಿಷೇಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.