ದಿಡ್ಡಳ್ಳಿ ಬಿಟ್ಟು ನಾವೆಲ್ಲಿಗೂ ತೆರಳೋದಿಲ್ಲ: ಮತ್ತೊಂದು ಹೋರಾಟಕ್ಕೆ ರೆಡಿಯಾಗುತ್ತಿದೆ ಪ್ಲಾನ್

Published : Jan 15, 2017, 02:40 AM ISTUpdated : Apr 11, 2018, 12:44 PM IST
ದಿಡ್ಡಳ್ಳಿ ಬಿಟ್ಟು ನಾವೆಲ್ಲಿಗೂ ತೆರಳೋದಿಲ್ಲ: ಮತ್ತೊಂದು ಹೋರಾಟಕ್ಕೆ ರೆಡಿಯಾಗುತ್ತಿದೆ ಪ್ಲಾನ್

ಸಾರಾಂಶ

ದಿಡ್ಡಳ್ಳಿ ಎಂದಾಕ್ಷಣ ನೆನೆಪಾಗುವುದು ಸರ್ಕಾರ ಇವರನ್ನು ಒಕ್ಕಲೆಬ್ಬಿಸಲು ಹೊರಟಿದ್ದು, ಹೋರಾಟ ಸಂಘಟನೆಗಳ ಆಕ್ರೋಶ, ಗಿರಿಜನರ ಬೆತ್ತಲೆ ಪ್ರತಿಭಟನೆ. ಇದಾದ ಬಳಿಕ ಜಿಲ್ಲಾಡಳಿತ ಹಾಗೂ ಸರ್ಕಾರ ಇಲ್ಲಿನ 611 ಕುಟುಂಬಗಳಿಗೆ ನಿವೇಶನ ನೀಡಲು  ಕೊಡಗು ಜಿಲ್ಲೆಯ ಸೋಮವಾರಪೇಟೆ ವ್ಯಾಪ್ತಿಯಲ್ಲಿ 17 ಏಕರೆ ಮತ್ತು ವಿರಾಜಪೇಟೆ ವ್ಯಾಪ್ತಿಯಲ್ಲಿ 8 ಎಕರೆ ಜಮೀನು ನಿಗದಿ ಪಡಿಸಿ ಇನ್ನೇನು ಹಕ್ಕು ಪತ್ರ ನೀಡಬೇಕು ಎನ್ನುವಷ್ಟರಲ್ಲಿ  ದಿಡ್ಡಳ್ಳಿಯ ಈ ಜನ ಮತ್ತೆ ನಿರ್ಧಾರ ಬದಲಿಸಿದ್ದಾರೆ. ನಮಗೆ ದಿಡ್ಡಳ್ಳಿಯಲ್ಲೇ ನಿವೇಶನ ಬೇಕು  ಎಂದು ಪಟ್ಟು ಹಿಡಿದಿದ್ದಾರೆ.

ಮಡಿಕೇರಿ(ಜ.15): ದಿಡ್ಡಳ್ಳಿ,ಈ ಹೆಸರು ಕೇಳಿದ ತಕ್ಷಣ ಸರ್ಕಾರವೇ ಬೆಚ್ಚಿ ಬಿದ್ದು ಇವರ ನೆರವಿಗೆ ಬಂದು ನಿಂತು ಇಲ್ಲಿನ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಮುಂದೆ ಬಂದಿತ್ತು, ಒಂದು ಹಂತದಲ್ಲಿ ಹೊಸ ಸ್ಥಳಕ್ಕೆ ತೆರಳುವುದಕ್ಕೆ ಸಿದ್ದವಾಗಿದ್ದ ವಾಸಿಗಳು ಮತ್ತೆ ರಾಗ ಬದಲಾಯಿಸಿದ್ದಾರೆ. ದಿಡ್ಡಳ್ಳಿಯೇ ನಮ್ಮ ಜನ್ಮ ಭೂಮಿ,ಅಲ್ಲೇ ನಮಗೆ ನಿವೇಶನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ದಿಡ್ಡಳ್ಳಿ ಎಂದಾಕ್ಷಣ ನೆನೆಪಾಗುವುದು ಸರ್ಕಾರ ಇವರನ್ನು ಒಕ್ಕಲೆಬ್ಬಿಸಲು ಹೊರಟಿದ್ದು, ಹೋರಾಟ ಸಂಘಟನೆಗಳ ಆಕ್ರೋಶ, ಗಿರಿಜನರ ಬೆತ್ತಲೆ ಪ್ರತಿಭಟನೆ. ಇದಾದ ಬಳಿಕ ಜಿಲ್ಲಾಡಳಿತ ಹಾಗೂ ಸರ್ಕಾರ ಇಲ್ಲಿನ 611 ಕುಟುಂಬಗಳಿಗೆ ನಿವೇಶನ ನೀಡಲು  ಕೊಡಗು ಜಿಲ್ಲೆಯ ಸೋಮವಾರಪೇಟೆ ವ್ಯಾಪ್ತಿಯಲ್ಲಿ 17 ಏಕರೆ ಮತ್ತು ವಿರಾಜಪೇಟೆ ವ್ಯಾಪ್ತಿಯಲ್ಲಿ 8 ಎಕರೆ ಜಮೀನು ನಿಗದಿ ಪಡಿಸಿ ಇನ್ನೇನು ಹಕ್ಕು ಪತ್ರ ನೀಡಬೇಕು ಎನ್ನುವಷ್ಟರಲ್ಲಿ  ದಿಡ್ಡಳ್ಳಿಯ ಈ ಜನ ಮತ್ತೆ ನಿರ್ಧಾರ ಬದಲಿಸಿದ್ದಾರೆ. ನಮಗೆ ದಿಡ್ಡಳ್ಳಿಯಲ್ಲೇ ನಿವೇಶನ ಬೇಕು  ಎಂದು ಪಟ್ಟು ಹಿಡಿದಿದ್ದಾರೆ.

ಅರಣ್ಯ ಇಲಾಖೆ ದಿಡ್ಡಳ್ಳಿಯನ್ನು ಅರಣ್ಯ ಪೈಸರಿ ಎಂದು ಘೋಷಣೆ ಮಾಡಿಕೊಂಡಿದೆ. ಆದರೆ, ಈ ವ್ಯಾಪ್ತಿಯಲ್ಲಿ 8 ಗಿರಿಜನ ಹಾಡಿಗಳಿವೆ ಎನ್ನುವ ದಾಖಲೆಗಳೂ ಇವೆ. ಆದರೆ, ಜಿಲ್ಲಾಡಳಿತ  ಹಾಗೂ ಅರಣ್ಯ ಇಲಾಖೆ ಮುಗ್ದ ವಾಸಿಗಳಿಗೆ ಮೋಸ ಮಾಡಲು ಹೊರಟಿದೆ ಎನ್ನುವುದು ಆರೋಪ.

ಒಟ್ಟಿನಲ್ಲಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಜಿಲ್ಲೆಯ ಇತರೆಡೆಗಳಲ್ಲಿನ ಗಿರಿಜನರಿಗಿಂತ ಮೊದಲು ದಿಡ್ಡಳ್ಳಿಯ ಜನರಿಗೆ ನಿವೇಶನ ಒದಗಿಸಲು ಜಿಲ್ಲಾಡಳಿತ ಮುಂದಾಗಿತ್ತು.. ಬಟ್ ದಿಡ್ಡಳ್ಳಿ ಗಿರಿಜನರು ಮಾತ್ರ ತಮಗೇ ದಿಡ್ಡಳಿಯೇ ಬೇಕು ಎಂದು ಪಟ್ಟು ಹಿಡಿದಿರೋದು ಸರ್ಕಾರಕ್ಕೆ ಮತ್ತೆ ತಲೆನೋವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು