ತಲ್ವಾರ್ ವಾರ್; ಸಿಬಿಐ ಜಡ್ಜ್'ರನ್ನು ಫಿಲಂ ಆ್ಯಕ್ಟರ್, ಮ್ಯಾಥ್ಸ್ ಟೀಚರ್'ಗೆ ಹೋಲಿಕೆ ಮಾಡಿದ ಹೈಕೋರ್ಟ್

Published : Oct 13, 2017, 11:22 AM ISTUpdated : Apr 11, 2018, 12:39 PM IST
ತಲ್ವಾರ್ ವಾರ್; ಸಿಬಿಐ ಜಡ್ಜ್'ರನ್ನು ಫಿಲಂ ಆ್ಯಕ್ಟರ್, ಮ್ಯಾಥ್ಸ್ ಟೀಚರ್'ಗೆ ಹೋಲಿಕೆ ಮಾಡಿದ ಹೈಕೋರ್ಟ್

ಸಾರಾಂಶ

ಟ್ರಯಲ್ ಜಡ್ಜ್ ಪೂರ್ವಗ್ರಹಕ್ಕೊಳಗಾಗಿ ತಮ್ಮದೇ ರೀತಿಯಲ್ಲಿ ವಿಷಯ ಅರಿತರು. ಭಾವಾವೇಶಕ್ಕೆ ತುತ್ತಾಗಿ ಆಕ್ರೋಶಭರಿತರಾಗಿ ಯೋಚಿಸಿದರು. ಪ್ರಕರಣದಲ್ಲಿದ್ದ ಸಾಕ್ಷ್ಯ ಮತ್ತು ಸಂದರ್ಭಗಳನ್ನೇ ಅಂತಿಮವಾಗಿಟ್ಟುಕೊಂಡು ಗಣಿತದ ಸಮಸ್ಯೆ ಬಗೆಹರಿಸಲು ಯತ್ನಿಸಿದರು. ಆದರೆ, ಟ್ರಯಲ್ ಜಡ್ಜ್ ಆದವರು ಗಣಿತದ ಪ್ರಶ್ನೆ ಸಾಲ್ವ್ ಮಾಡುವ ಮ್ಯಾಥ್ಸ್ ಟೀಚರ್'ನಂತೆ ಆಗಬಾರದು," ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳು ಟೀಕಿಸಿದ್ದಾರೆ.

ನವದೆಹಲಿ(ಅ. 13): ಆರುಷಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿದ್ದ ನೂಪುರ್ ಮತ್ತು ರಾಜೇಶ್ ತಲ್ವಾರ್ ಅವರನ್ನು ಆರೋಪ ಮುಕ್ತಗೊಳಿಸಿ ಜೈಲಿನಿಂದ ಬಿಡುಗಡೆ ಮಾಡಿಸಿ ಅಲಹಾಬಾದ್ ಹೈಕೋರ್ಟ್ ನಿನ್ನೆ ಅಚ್ಚರಿಯ ತೀರ್ಪು ನೀಡಿತು. ಆರುಷಿ ಪೋಷಕರನ್ನು ದೋಷಿಗಳನ್ನಾಗಿ ಮಾಡಿ ಜೀವಾವಧಿ ಶಿಕ್ಷೆ ವಿಧಿಸಿದ್ದ ಸಿಬಿಐ ಕೋರ್ಟ್'ನ ತೀರ್ಪನ್ನು ಹೈಕೋರ್ಟ್ ತಲೆಕೆಳಗು ಮಾಡಿತು. ಕೇವಲ ಶಂಕೆಯ ಆಧಾರದ ಮೇಲೆ ಅಪರಾಧಿಗಳೆಂದು ತೀರ್ಮಾನಿಸುವುದು ಸರಿಯಲ್ಲ ಎಂದು ಹೇಳಿದ ಹೈಕೋರ್ಟ್, ತಲ್ವಾರ್ ದಂಪತಿಯನ್ನು ಖುಲಾಸೆಗೊಳಿಸಿತು.

ನ್ಯಾ| ಬಾಲಕೃಷ್ಣ ನಾರಾಯಣ ಮತ್ತು ನ್ಯಾ| ಎ.ಕೆ.ಮಿಶ್ರಾ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ತನ್ನ ತೀರ್ಪಿನಲ್ಲಿ ಕೆಳನ್ಯಾಯಾಲಯದ ನ್ಯಾಯಮೂರ್ತಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಟ್ರಯಲ್ ಜಡ್ಜ್ ಆದವರು ತನ್ನದೇ ಕಲ್ಪನೆಗಳಲ್ಲಿ ತೊಡಗದೆ ಬಹಳ ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ತೀರ್ಪು ನೀಡಬೇಕಿತ್ತು. ಆದರೆ, ಆ ನ್ಯಾಯಮೂರ್ತಿಗಳು ಕಾನೂನನ್ನೇ ತಲೆಕೆಳಗು ಮಾಡಿದ್ದರು ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಗಣಿತದ ಟೀಚರ್'ಗೆ ಹೋಲಿಕೆ:
ಟ್ರಯಲ್ ಜಡ್ಜ್ ಪೂರ್ವಗ್ರಹಕ್ಕೊಳಗಾಗಿ ತಮ್ಮದೇ ರೀತಿಯಲ್ಲಿ ವಿಷಯ ಅರಿತರು. ಭಾವಾವೇಶಕ್ಕೆ ತುತ್ತಾಗಿ ಆಕ್ರೋಶಭರಿತರಾಗಿ ಯೋಚಿಸಿದರು. ಪ್ರಕರಣದಲ್ಲಿದ್ದ ಸಾಕ್ಷ್ಯ ಮತ್ತು ಸಂದರ್ಭಗಳನ್ನೇ ಅಂತಿಮವಾಗಿಟ್ಟುಕೊಂಡು ಗಣಿತದ ಸಮಸ್ಯೆ ಬಗೆಹರಿಸಲು ಯತ್ನಿಸಿದರು. ಆದರೆ, ಟ್ರಯಲ್ ಜಡ್ಜ್ ಆದವರು ಗಣಿತದ ಪ್ರಶ್ನೆ ಸಾಲ್ವ್ ಮಾಡುವ ಮ್ಯಾಥ್ಸ್ ಟೀಚರ್'ನಂತೆ ಆಗಬಾರದು," ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳು ಟೀಕಿಸಿದ್ದಾರೆ.

ಫಿಲಂ ಡೈರೆಕ್ಟರ್'ಗೆ ಹೋಲಿಕೆ:
ಪ್ರಕರಣದಲ್ಲಿ ಏನು ಘಟಿಸಿತು ಎಂಬ ಬಗ್ಗೆ ಟ್ರಯಲ್ ಜಡ್ಜ್ ತಮ್ಮದೇ ಕಲ್ಪನೆಯಲ್ಲಿ ತೇಲಿರುವುದು ಕಂಡುಬಂದಿದೆ. ಜಲವಿಹಾರ್'ನ ಫ್ಲ್ಯಾಟ್'ನ ಒಳಗೆ ಮತ್ತು ಹೊರಗೆ ಏನೇನು ನಡೆಯಿತು ಎಂಬುದನ್ನು ಸಿನಿಮಾ ನಿರ್ದೇಶಕನ ರೀತಿಯಲ್ಲಿ ನ್ಯಾಯಮೂರ್ತಿಗಳು ಕಾಲ್ಪನಿಕ ದೃಶ್ಯಗಳನ್ನ ಹೆಣೆದಿದ್ದರೆಂದು ಹೈಕೋರ್ಟ್ ಜಡ್ಜ್'ಗಳು ತಮ್ಮ ತೀರ್ಪಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾಸ್ತವವಾಗಿ ಆರುಷಿ ತಲ್ವಾರ್ ಮತ್ತು ಹೇಮರಾಜ್ ಕೊಲೆಯಾದಾಗ ಆ ಮನೆಯಲ್ಲಿದ್ದದ್ದು ಆ ಹುಡುಗಿಯ ತಂದೆ-ತಾಯಿ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಮಾತ್ರವೇ. ಸಿಬಿಐ ನ್ಯಾಯಾಲಯವು ಇದನ್ನೇ ಪ್ರಮುಖವಾಗಿ ಆಧಾರವಾಗಿಟ್ಟುಕೊಂಡು ಅವರಿಬ್ಬರನ್ನು ದೋಷಿಯನ್ನಾಗಿ ತೀರ್ಮಾನಿಸಿರುವುದು ಕಂಡುಬಂದಿದೆ. ಪ್ರಕರಣದಲ್ಲಿ ಸಿಬಿಐ ಕೋರ್ಟ್ ತೋರಿದ ಈ ಧೋರಣೆಯನ್ನೇ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ
ಪ್ರವಾಸಿಗರ ಸ್ವರ್ಗ.. ಅಸ್ಸಾಂ ರಾಜ್ಯ ಯಾವುದಕ್ಕೆ ಪ್ರಸಿದ್ಧ ನಿಮಗೆ ಗೊತ್ತೇ?