
ಚೆನ್ನೈ[ಡಿ.09]: ತಮಿಳುನಾಡಿನ ನಾನಾ ಭಾಗಗಳಿಂದ ರಾಮೇಶ್ವರಂಗೆ ಸಂಪರ್ಕ ಕಲ್ಪಿಸುವ ಏಕಮಾತ್ರ 100 ವರ್ಷದ ಪಂಬನ್ ಕ್ಯಾಂಟಿಲೆವರ್ ರೈಲ್ವೇ ಮೇಲ್ಸೇತುವೆಗೆ ಹಾನಿಯಾಗಿರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಮೇಲ್ಸೇತುವೆ ಸಂಪೂರ್ಣ ದುರಸ್ತಿಯಗುವವರೆಗೂ ಅಂದರೆ 45 ದಿನಗಳ ಕಾಲ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಹಾಗಾಗಿ, ಇನ್ನು ಯಾವುದೇ ಭಾಗದಿಂದ ರಾಮೆಶ್ವರಂಗೆ ತೆರಳಲು ರೈಲುಗಳು ಲಭ್ಯವಿರುವುದಿಲ್ಲ.
ಮೇಲ್ಸೇತುವೆಯ ಶೇರ್ಜರ್ ರೋಲಿಂಗ್ ಮಾದರಿಯ ಲಿಫ್ಟ್ಸ್ಟ್ಯಾನ್ ಮುರಿದು ಹೋಗಿರುವುದು ಹಾಗೂ ಕೆಲವೆಡೆ ಮೇಲ್ಸೇತುವೆ ಮೇಲಿನ ರೈಲ್ವೇ ಹಳಿಗೆ ಕೂಡಾ ಹಾನಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ