
ಬೆಂಗಳೂರು (ಡಿ.11): ಆ್ಯಂಬುಲೆನ್ಸ್ ಬಂದರೆ ರೋಡ್ ಕ್ಲಿಯರ್ ಮಾಡಬೇಕು. ರೋಡ್ ರೆಗ್ಯುಲೇಷನ್ಸ್ ಅವರಿಗೆ ಅನ್ವಯ ಆಗಲ್ಲ ಅಂತ ರೂಲ್ಸೇ ಇದೆ. ಸೋ ಇದನ್ನೇ ಉಪಯೋಗಿಸಿಕೊಂಡು ಕೆಲ ಆ್ಯಂಬ್ಯುಲೆನ್ಸ್ ಡ್ರೈವರ್'ಗಳು ಸುಮ್ ಸುಮ್ನೇ ಸೈರನ್ ಹೊಡ್ಕೊಂಡು ಹೋಗುತ್ತಾರೆ. ಇದನ್ನ ನಿಯಂತ್ರಿಸಲು ರಸ್ತೆ ಸುರಕ್ಷತೆ ಮತ್ತು ಸಂಚಾರಿ ಪೊಲೀಸ್ ಇಲಾಖೆ ಅಂಬ್ಯುಲೆನ್ಸ್ ಮೇಲಿರುವ ಸೈರನ್ ಹಾಗೂ ಅಂಬ್ಯುಲೆನ್ಸ್ ಮೇಲಿರುವ ಲೈಟ್ ಕಲರ್ ಚೇಜ್ ಮಾಡೋಕೆ ಮುಂದಾಗಿದೆ.
ತುರ್ತು ಇದ್ದರೆ ಕೆಂಪು ಲೈಟ್ ಮತ್ತು ಲಾಂಗ್ ಸೈರನ್, ನಾರ್ಮಲ್ ಕೇಸ್'ಗಳಾದ್ರೆ ನೀಲಿ ಬಣ್ಣದ ಲೈಟ್ ಹಾಗೂ ಪ್ರತ್ಯೇಕ ಸೈರನ್ ನೀಡಲು ಚಿಂತನೆ ನಡೆಸಲಾಗಿದೆ. ಒಂದು ವೇಳೆ ಅನುಮಾನ ಬಂದರೆ ಅಲ್ಲಿಯೇ ತಡೆ ಹಿಡಿದು ಪರಿಶೀಲನೆ ಕೂಡಾ ಮಾಡಲಾಗುತ್ತದೆ.
ಇಷ್ಟು ದಿನ ಆ್ಯಂಬುಲೆನ್ಸ್ ಸೈರನ್ ಇದೆ ಅಂತಾ ಸುಮ್ ಸುಮ್ನೇ ಹೋಗುತ್ತಿದ್ದ ಡ್ರೈವರ್'ಗಳಿಗೂ ಈ ಹೊಸ ನಿಯಮದಿಂದ ಬ್ರೇಕ್ ಬೀಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.